‘ನಗರಸಭೆ ಸ್ವಚ್ಛಗೊಳಿಸಿದರೆ, ಎರಡು ದಿನಗಳಲ್ಲಿ ಮತ್ತದೇ ಸ್ಥಿತಿಗೆ ಬರುತ್ತದೆ. ಒಡೆದ ಮದ್ಯದ ಬಾಟಲಿಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಹರಕು ಬಟ್ಟೆ, ಹರಿದ ಚೀಲ, ಕೊಳೆತುನಾರುವ ತಿನಿಸುಗಳನ್ನು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ತುಂಬಿ ತಂದು ರಾತ್ರಿ ವೇಳೆ ಎಸೆದು ಹೋಗುತ್ತಾರೆ. ಇಂಥವರನ್ನು ನಗರಸಭೆ ಹಿಡಿದು, ದಂಡ ಹಾಕಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.