‘ಎರಡನೇ ಹಂತದ ಯೋಜನೆಯಲ್ಲಿ ಗುರುತಿಸಿದ ಫಲಾನುಭವಿಗಳ ಮನೆಗಳು ತೀರಾ ಕುಗ್ರಾಮ, ಗುಡ್ಡಗಾಡು ಪ್ರದೇಶದಲ್ಲಿವೆ. ಅಲ್ಲಿ ವಿದ್ಯುತ್ ಕಂಬ ಅಳವಡಿಕೆ, ತಂತಿ ಎಳೆಯಲು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ. ಕೆಲವು ಕಡೆ ಜಾಗದ ವಿವಾದವೂ ಇದ್ದು ಅದನ್ನು ಬಗೆಹರಿಸಿ ಸಂಪರ್ಕ ಒದಗಿಸಲು ವಿಳಂಬವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಅವಧಿ ಪಡೆದುಕೊಳ್ಳಲಾಗಿದೆ’ ಎಂದು ಹೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.