<p><strong>ಕಾರವಾರ:</strong> 'ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಮೇ 6ರಂದು 40 ಮಕ್ಕಳು ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರಿಗೆ ಸ್ಕೇಟಿಂಗ್ ಮೂಲಕ ಸಾಗಲಿದ್ದಾರೆ' ಎಂದು ಕೈಗಾ ರೋಲರ್ ಸ್ಕೇಟಿಂಗ್ ಸಂಘದ ತರಬೇತುದಾರ ದಿಲೀಪ ಹಣಬರ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂದು ಬೆಳಿಗ್ಗೆ 10ಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡುವರು. ಸ್ಕೇಟಿಂಗ್ ಮಾಡುವವರು ಯಲ್ಲಾಪುರ- ಶಿರಸಿ- ಸಾಗರ- ತಿಪಟೂರು- ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಮೇ 12ರಂದು ತಲುಪಲಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ಪತ್ರ ವಿತರಿಸಲಿದ್ದಾರೆ' ಎಂದರು.</p>.<p>'ಒಟ್ಟು 610 ಕಿಲೋಮೀಟರ್ ದೂರವನ್ನು ಏಳು ದಿನಗಳಲ್ಲಿ ಕ್ರಮಿಸಲಿದ್ದಾರೆ. 8ರಿಂದ 20 ವಯೋಮಾನದ ಮಕ್ಕಳಿದ್ದು, ತಲಾ 10 ಮಂದಿಯ ನಾಲ್ಕು ತಂಡಗಳನ್ನು ಮಾಡಲಾಗಿದೆ. 15 ಬಾಲಕಿಯರೂ ತಂಡದಲ್ಲಿದ್ದಾರೆ. ಎಲ್ಲರೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಾಗೂ ರಾಜ್ಯ ತಂಡಕ್ಕೆ ಆಯ್ಕೆಯಾದವರಾಗಿದ್ದಾರೆ' ಎಂದು ತಿಳಿಸಿದರು.</p>.<p>'ದಾರಿಯುದ್ದಕ್ಕೂ 630 ಹಳ್ಳಿಗಳಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಬ್ಯಾನರ್, ಕರಪತ್ರಗಳನ್ನು ಹಂಚಲಿದ್ದಾರೆ. ದಿನಕ್ಕೆ ಆರು ತಾಸು ಸ್ಕೇಟಿಂಗ್ ಮಾಡುತ್ತ 100ರಿಂದ 110 ಕಿಲೋಮೀಟರ್ ಸಾಗಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಸುಮಾರು 310 ಕಿ.ಮೀ.ಗಳಷ್ಟು ದೂರ ಸ್ಕೇಟಿಂಗ್ ಮಾಡಲಿದ್ದಾರೆ' ಎಂದು ಹೇಳಿದರು.</p>.<p>ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮಾತನಾಡಿ, 'ಈ ಕಾರ್ಯಕ್ರಮವು ಇಲಾಖೆಯ ಯೋಜನೆಗಳ ಪ್ರಚಾರಕ್ಕೆ ಸಹಕಾರಿಯಾಗಲಿದೆ. 1.93 ಲಕ್ಷ ಕಟ್ಟಡ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಅವರಿಗೆ ಹಲವು ಯೋಜನೆಗಳಿವೆ. ಶ್ರಮಿಕ ಸಂಜೀವಿನಿಯಿದೆ. ಶಿಶು ಪಾಲನಾ ಕೇಂದ್ರವನ್ನು ಸದ್ಯವೇ ಜಾರಿ ಮಾಡಲಾಗುತ್ತದೆ' ಎಂದರು.</p>.<p>ಪ್ರಮುಖರಾದ ರಾಜನ್ ಬಾನಾವಳಿ, ಸತೀಶ ನಾಯ್ಕ, ಲಕ್ಷ್ಮಿಕಾಂತ ಭಟ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> 'ಕಾರ್ಮಿಕ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ನೀಡುವ ಸಲುವಾಗಿ ಮೇ 6ರಂದು 40 ಮಕ್ಕಳು ಜಿಲ್ಲಾಧಿಕಾರಿ ಕಚೇರಿಯಿಂದ ಬೆಂಗಳೂರಿಗೆ ಸ್ಕೇಟಿಂಗ್ ಮೂಲಕ ಸಾಗಲಿದ್ದಾರೆ' ಎಂದು ಕೈಗಾ ರೋಲರ್ ಸ್ಕೇಟಿಂಗ್ ಸಂಘದ ತರಬೇತುದಾರ ದಿಲೀಪ ಹಣಬರ ತಿಳಿಸಿದರು.</p>.<p>ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಂದು ಬೆಳಿಗ್ಗೆ 10ಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಚಾಲನೆ ನೀಡುವರು. ಸ್ಕೇಟಿಂಗ್ ಮಾಡುವವರು ಯಲ್ಲಾಪುರ- ಶಿರಸಿ- ಸಾಗರ- ತಿಪಟೂರು- ಕುಣಿಗಲ್ ಮಾರ್ಗವಾಗಿ ಬೆಂಗಳೂರಿಗೆ ಮೇ 12ರಂದು ತಲುಪಲಿದ್ದಾರೆ. ಅಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಮಾಣ ಪತ್ರ ವಿತರಿಸಲಿದ್ದಾರೆ' ಎಂದರು.</p>.<p>'ಒಟ್ಟು 610 ಕಿಲೋಮೀಟರ್ ದೂರವನ್ನು ಏಳು ದಿನಗಳಲ್ಲಿ ಕ್ರಮಿಸಲಿದ್ದಾರೆ. 8ರಿಂದ 20 ವಯೋಮಾನದ ಮಕ್ಕಳಿದ್ದು, ತಲಾ 10 ಮಂದಿಯ ನಾಲ್ಕು ತಂಡಗಳನ್ನು ಮಾಡಲಾಗಿದೆ. 15 ಬಾಲಕಿಯರೂ ತಂಡದಲ್ಲಿದ್ದಾರೆ. ಎಲ್ಲರೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹಾಗೂ ರಾಜ್ಯ ತಂಡಕ್ಕೆ ಆಯ್ಕೆಯಾದವರಾಗಿದ್ದಾರೆ' ಎಂದು ತಿಳಿಸಿದರು.</p>.<p>'ದಾರಿಯುದ್ದಕ್ಕೂ 630 ಹಳ್ಳಿಗಳಲ್ಲಿ ಕಾರ್ಮಿಕ ಇಲಾಖೆಯ ಯೋಜನೆಗಳ ಬ್ಯಾನರ್, ಕರಪತ್ರಗಳನ್ನು ಹಂಚಲಿದ್ದಾರೆ. ದಿನಕ್ಕೆ ಆರು ತಾಸು ಸ್ಕೇಟಿಂಗ್ ಮಾಡುತ್ತ 100ರಿಂದ 110 ಕಿಲೋಮೀಟರ್ ಸಾಗಲಿದ್ದಾರೆ. ಪ್ರತಿ ವಿದ್ಯಾರ್ಥಿಗೆ ಸುಮಾರು 310 ಕಿ.ಮೀ.ಗಳಷ್ಟು ದೂರ ಸ್ಕೇಟಿಂಗ್ ಮಾಡಲಿದ್ದಾರೆ' ಎಂದು ಹೇಳಿದರು.</p>.<p>ಕಾರ್ಮಿಕ ಅಧಿಕಾರಿ ಅಕ್ಬರ್ ಮುಲ್ಲಾ ಮಾತನಾಡಿ, 'ಈ ಕಾರ್ಯಕ್ರಮವು ಇಲಾಖೆಯ ಯೋಜನೆಗಳ ಪ್ರಚಾರಕ್ಕೆ ಸಹಕಾರಿಯಾಗಲಿದೆ. 1.93 ಲಕ್ಷ ಕಟ್ಟಡ ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಅವರಿಗೆ ಹಲವು ಯೋಜನೆಗಳಿವೆ. ಶ್ರಮಿಕ ಸಂಜೀವಿನಿಯಿದೆ. ಶಿಶು ಪಾಲನಾ ಕೇಂದ್ರವನ್ನು ಸದ್ಯವೇ ಜಾರಿ ಮಾಡಲಾಗುತ್ತದೆ' ಎಂದರು.</p>.<p>ಪ್ರಮುಖರಾದ ರಾಜನ್ ಬಾನಾವಳಿ, ಸತೀಶ ನಾಯ್ಕ, ಲಕ್ಷ್ಮಿಕಾಂತ ಭಟ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>