ಕೃಷಿ ಕೂಲಿಕಾರ್ಮಿಕರ ಕೊರತೆಯ ಇಂದಿನ ದಿನಗಳಲ್ಲಿ ಅವರು, ಲಭ್ಯ ಉಪಕರಣವನ್ನೇ ಕ್ರಿಯಾಶೀಲವಾಗಿ ಬಳಸಿಕೊಂಡಿದ್ದಾರೆ. ವೀಡ್ ಕಟರ್ ಕೇವಲ ಕಳೆ ತೆಗೆಯಲು ಮಾತ್ರವಲ್ಲ, ಭತ್ತದ ಗೊಣವೆ ಹಾಕಲು, ಗದ್ದೆಯ ಹಾಳಿ ಮಾಡಲು, ಕರಿಮೆಣಸನ್ನು ಬೋಳಕಾಳು ಮಾಡಲು ಬಳಸಬಹುದೆಂದು ತೋರಿಸಿದ್ದಾರೆ ರಾಮಚಂದ್ರ. ‘10 ವರ್ಷಗಳ ಹಿಂದೆಯೇ ಈ ಪ್ರಯೋಗ ಮಾಡಿದ್ದೆ. ಆಗ ಹೊಂಡಾ ಕಂಪನಿಯ ಯಂತ್ರ ನನ್ನ ಬಳಿಯಿತ್ತು. ಕಂಪನಿಯ ಪ್ರಮುಖರು ಮನೆಗೆ ಬಂದು ವೀಕ್ಷಿಸಿ, ಅವರ ನಿಬ್ಬೆರಗಾಗಿದ್ದರು. ಇದು ಹೊಸ ಮಾದರಿಯ ಬಳಕೆ ಎಂದು ಪ್ರಶಂಸಿಸಿದ್ದರು’ ಎನ್ನುತ್ತಾರೆ ಅವರು.