ಕಾರವಾರ: 'ಈ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಕನಿಷ್ಠ 15 ಸ್ಥಾನಗಳನ್ನು ಬಿ.ಜೆ.ಪಿ ಗೆಲ್ಲಲಿದೆ. ಮೇಲ್ಮನೆಯಲ್ಲಿ ಬಹುಮತ ಪಡೆದುಕೊಳ್ಳುವ ವಿಶ್ವಾಸವಿದೆ' ಎಂದು ವಿಧಾನಪರಿಷತ್ ಸದಸ್ಯ ಎಸ್.ವಿ.ಸಂಕನೂರು ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿಧಾನಪರಿಷತ್ನ 75 ಸ್ಥಾನಗಳ ಪೈಕಿ 32ರಲ್ಲಿ ಬಿ.ಜೆ.ಪಿ ಸದಸ್ಯರಿದ್ದಾರೆ. ಇನ್ನು 12 ಸ್ಥಾನಗಳನ್ನು ಗೆದ್ದರೆ ಬಹುಮತ ಸಿಗುತ್ತದೆ. ಈ ಮೂಲಕ ಆಡಳಿತ ಸುಗಮವಾಗುತ್ತದೆ' ಎಂದು ಹೇಳಿದರು.
'ಉತ್ತರ ಕನ್ನಡ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿರುವ ಗಣಪತಿ ಉಳ್ವೇಕರ್ ಸಜ್ಜನ ವ್ಯಕ್ತಿ. ಕಾರವಾರ ನಗರಸಭೆಯಲ್ಲಿ ಆಡಳಿತ ನಡೆಸಿದ್ದ ಅವರಿಗೆ ಜನರ ಸಮಸ್ಯೆಗಳ ಅರಿವಿದೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದೇವೆ' ಎಂದು ಹೇಳಿದರು.
ಬಿ.ಜೆ.ಪಿ ಜಿಲ್ಲಾ ಘಟಕದ ವಕ್ತಾರ ನಾಗರಾಜ ನಾಯಕ, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಮುಖಂಡರಾದ ರಾಜೇಶ ನಾಯ್ಕ, ನಾಗೇಶ ಕುರ್ಡೇಕರ್ ಇದ್ದರು.