ಅಶೋಕ ಲೇಲ್ಯಾಂಡ್ ಲಿಮಿಟೆಡ್ ಉಪಾಧ್ಯಕ್ಷ ನರಸಿಂಹ ಹೆಗಡೆ ಬಾಳೇಗದ್ದೆ ಮಾತನಾಡಿ, ‘ಶಿಷ್ಯರ ನಡೆ ಸನ್ಮಾರ್ಗದಲ್ಲಿದ್ದರೆ ಗುರುಗಳಿಗೆ ಸಾರ್ಥಕ ಭಾವ ಉಂಟಾಗುತ್ತದೆ. ಈ ಸಾರ್ಥಕತೆ ಶಿಷ್ಯರ ಏಳ್ಗೆಗೆ ಪೂರಕವಾಗುತ್ತದೆ. ಆರ್ಥಿಕ ನಿಶ್ಶಕ್ತಿಯಿಂದ ಉತ್ತಮ ಶಿಕ್ಷಣ ಮರೀಚಿಕೆಯಾಗಿದೆ. ಮಠಗಳ ನೇತೃತ್ವದಲ್ಲಿ ಬಡ ವರ್ಗಗಳ ಆರ್ಥಿಕ ಸಬಲತೆಯ ಮಾರ್ಗ ಸೃಷ್ಟಿಯಾಗಬೇಕು’ ಎಂದರು. ಕೇಂದ್ರ ಮಾತೃ ಮಂಡಳಿಯ ಅಧ್ಯಕ್ಷೆ ವೇದಾ ಹೆಗಡೆ, ರಾಮ ಕ್ಷತ್ರೀಯ ಸಮಾಜದ ಎಸ್.ಕೆ.ನಾಯ್ಕ ಇದ್ದರು. ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಸ್ವಾಗತಿಸಿದರು. ಆರ್.ಎನ್.ಭಟ್ಟ ನಿರೂಪಿಸಿದರು.