ಮನುಷ್ಯನ ಶರೀರಕ್ಕೆ ಸರಿಯಾದ ನಿದ್ರೆ ಅವಶ್ಯ. ನಿದ್ರೆ ಎಂದರೆ ಸಂಪೂರ್ಣ ವಿಶ್ರಾಂತಿ. ವಿಶ್ರಾಂತಿಯಿಂದಲೇ ಮನುಷ್ಯನ ಅನೇಕ ರೋಗಗಳು ಶಮನವಾಗುತ್ತವೆ. ಮನಸ್ಸು ಕೂಡ ಶಾಂತವಾಗಿರುತ್ತದೆ. ಮನಸ್ಸು ಆರೋಗ್ಯದ ಭಾಗವಾಗಿದ್ದು, ಮನಸ್ಸಿಗೆ ಒಳ್ಳೆಯ ವಿಚಾರಗಳನ್ನೇ ನೀಡಬೇಕು. ಮನಸ್ಸು ಶಾಂತವಾಗಿರಲು ಧ್ಯಾನ, ಪೂಜೆ, ಜಪ, ಆಧ್ಯಾತ್ಮಿಕ ಚಿಂತನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು.
ಶಿರಸಿ ಸೀಮಾ ಒಳಭಾಗಿಯ ಕೆಲವೇ ಶಿಷ್ಯರು, ಪಾದುಕಾಸೇವೆ ಮತ್ತು ಭಿಕ್ಷಾವಂದನೆ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸಿದರು. ಎಸ್.ಎನ್. ಗಾಂವಕರ್ ಕಾರ್ಯಕ್ರಮ ನಿರೂಪಿಸಿದರು.