ಅವರು ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದರು. ಹಾರ್ಕಿವ್ನಲ್ಲಿ ಸಿಲುಕಿದ್ದವರಿಗೆ ಭಾರತೀಯ ರಾಯಭಾರಿಗಳು ಸಹಾಯ ಮಾಡಿಲ್ಲ ಎನ್ನುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಉಕ್ರೇನ್ ಯಾವುದೋ ಸಮಾರಂಭದ ಮನೆಯಲ್ಲ, ಯುದ್ಧಪೀಡಿತ ಪ್ರದೇಶ. ಯುದ್ಧನೆಲದಿಂದ ವಾಪಸಾದ ವಿದ್ಯಾರ್ಥಿಯೊಬ್ಬ ಯಾವುದೋ ಪೂರ್ವಗ್ರಹದಿಂದ ಹೇಳಿಕೆ ನೀಡಿದ್ದಾನೆ. ಪಾಕಿಸ್ತಾನದ ವಿದ್ಯಾರ್ಥಿಗಳೂ ಭಾರತದ ತ್ರಿವರ್ಣ ಧ್ವಜ ಹಿಡಿದು ಗಡಿ ದಾಟಿದ್ದಾರೆ. ಹಾಗಾಗಿ, ಯಾವುದೋ ಒಬ್ಬ ವಿದ್ಯಾರ್ಥಿಯ ಹೇಳಿಕೆಯ ಕುರಿತು ನಾನು ಮಾತನಾಡುವುದಿಲ್ಲ' ಎಂದರು.