‘ಆರೋಪಿಯೊಬ್ಬನ ಸಹೋದರಿಯ ಜತೆ ಕೊಲೆಯಾಗಿರುವ ವ್ಯಕ್ತಿ ಸಂಬಂಧ ಹೊಂದಿದ್ದರಿಂದ ಈ ಹಿಂದೆಯೂ ಅನೇಕ ಬಾರಿ ಜಗಳ ನಡೆದಿದೆ. ಇಬ್ಬರಿಗೂ ಬುದ್ಧಿವಾದವನ್ನು ಸಹ ಹೇಳಲಾಗಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಸಾಧ್ಯತೆಯಿದೆ. ಕೊಲೆಯಾಗುವ ಕೆಲವು ಗಂಟೆಗಳ ಮೊದಲು ರವಿ ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು, ಆರೋಪಿಗಳ ಜೊತೆ ಇರುವುದಾಗಿ ಹೇಳಿಕೊಂಡಿದ್ದರು. ಇದಾದ ನಂತರ ಬೇರೊಬ್ಬರು ವ್ಯಕ್ತಿ, ಆಂದ್ಲೆ ಕ್ರಾಸ್ ಸಮೀಪ ರವಿ ಅವರ ಬೈಕ್ ಅಪಘಾತಕ್ಕೆ ಒಳಗಾಗಿರುವುದಾಗಿ ತಿಳಿಸಿದ್ದಾರೆ’ ಎಂದು ಅವರ ಸಹೋದರ ನಾಗರಾಜ ಹರಿಕಂತ್ರ ದೂರಿದರು.