<p><strong>ಕಾರವಾರ:</strong>‘ಗ್ರಾಮ ಪಂಚಾಯ್ತಿಯು ಮನೆ ತೆರಿಗೆಯನ್ನು ಏಕಾಏಕಿ ಏರಿಕೆ ಮಾಡಿದ್ದು, ಬಡವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಅದನ್ನು ಇಳಿಕೆ ಮಾಡಬೇಕು’ ಎಂದು ತಾಲ್ಲೂಕಿನ ಕಡವಾಡ ಗ್ರಾಮಸ್ಥರು ಜಿಲ್ಲಾಪಂಚಾಯ್ತಿಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.</p>.<p>‘ಜಿಲ್ಲಾ ಪಚಾಯ್ತಿಗೆ ಭೇಟಿ ನೀಡಿದ ಗ್ರಾಮಸ್ಥರು, ಈ ಹಿಂದೆ ₹ 111 ಪಾವತಿಸಲಾಗುತ್ತಿತ್ತು. ಆದರೆ, ಈಗ ಏಕಾಏಕಿ ₹ 371ಕ್ಕೆ ಹಚ್ಚಿಸಲಾಗಿದೆ.ಕರ ಏರಿಕೆ ಮಾಡುವ ಈ ವಿಧಾನನ್ಯಾಯಯುತವಾಗಿಲ್ಲ. ಅಲ್ಪಸ್ವಲ್ಪ ಹೆಚ್ಚಳ ಮಾಡಿದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ₹ 250ಕ್ಕೂ ಅಧಿಕ ಹೆಚ್ಚಿಸಿದರೆ ಪಾವತಿಸಲು ಕಷ್ಟವಾಗುತ್ತದೆ’ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಾಧಿಕಾರಿ ವಿ.ಎಂ.ಹೆಗಡೆ, ‘ಗ್ರಾಮ ಪಂಚಾಯ್ತಿಯಲ್ಲಿ ಯಾವ ಮಾದರಿಯಲ್ಲಿ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಪಡೆದುಕೊಳ್ಳುತ್ತೇವೆ. ಒಂದುವೇಳೆ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.</p>.<p>ಈ ಸಂದರ್ಭದಲ್ಲಿ ಸತೀಶ ಸಿ.ನಾಯ್ಕ, ಆನಂದಿ ಹುಲಸ್ವಾರ್, ಮಾರುತಿ ಹುಲಸ್ವಾರ್, ನಿತೇಶ್ ಎನ್.ಗೌಡ, ಆಶಿಶ್, ದರ್ಶನ್ ನಾಗೇಕರ್,ಕೃಷ್ಣ ಬಿ.ಹುಲಸ್ವಾರ್, ಧಾರೇಶ್ವರ ಹುಲಸ್ವಾರ್ ಸೇರಿದಂತೆ ಹತ್ತಾರು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong>‘ಗ್ರಾಮ ಪಂಚಾಯ್ತಿಯು ಮನೆ ತೆರಿಗೆಯನ್ನು ಏಕಾಏಕಿ ಏರಿಕೆ ಮಾಡಿದ್ದು, ಬಡವರಿಗೆ ಆರ್ಥಿಕ ಹೊರೆಯಾಗುತ್ತಿದೆ. ಆದ್ದರಿಂದ ಅದನ್ನು ಇಳಿಕೆ ಮಾಡಬೇಕು’ ಎಂದು ತಾಲ್ಲೂಕಿನ ಕಡವಾಡ ಗ್ರಾಮಸ್ಥರು ಜಿಲ್ಲಾಪಂಚಾಯ್ತಿಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.</p>.<p>‘ಜಿಲ್ಲಾ ಪಚಾಯ್ತಿಗೆ ಭೇಟಿ ನೀಡಿದ ಗ್ರಾಮಸ್ಥರು, ಈ ಹಿಂದೆ ₹ 111 ಪಾವತಿಸಲಾಗುತ್ತಿತ್ತು. ಆದರೆ, ಈಗ ಏಕಾಏಕಿ ₹ 371ಕ್ಕೆ ಹಚ್ಚಿಸಲಾಗಿದೆ.ಕರ ಏರಿಕೆ ಮಾಡುವ ಈ ವಿಧಾನನ್ಯಾಯಯುತವಾಗಿಲ್ಲ. ಅಲ್ಪಸ್ವಲ್ಪ ಹೆಚ್ಚಳ ಮಾಡಿದರೆ ಹೇಗೋ ಹೊಂದಾಣಿಕೆ ಮಾಡಿಕೊಳ್ಳಬಹುದು. ಆದರೆ, ₹ 250ಕ್ಕೂ ಅಧಿಕ ಹೆಚ್ಚಿಸಿದರೆ ಪಾವತಿಸಲು ಕಷ್ಟವಾಗುತ್ತದೆ’ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು.</p>.<p>ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯ್ತಿಯ ಮುಖ್ಯ ಲೆಕ್ಕಾಧಿಕಾರಿ ವಿ.ಎಂ.ಹೆಗಡೆ, ‘ಗ್ರಾಮ ಪಂಚಾಯ್ತಿಯಲ್ಲಿ ಯಾವ ಮಾದರಿಯಲ್ಲಿ ಕರ ಸಂಗ್ರಹಿಸಲಾಗಿದೆ ಎಂದು ಮಾಹಿತಿ ಪಡೆದುಕೊಳ್ಳುತ್ತೇವೆ. ಒಂದುವೇಳೆ ತಪ್ಪಾಗಿದ್ದರೆ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.</p>.<p>ಈ ಸಂದರ್ಭದಲ್ಲಿ ಸತೀಶ ಸಿ.ನಾಯ್ಕ, ಆನಂದಿ ಹುಲಸ್ವಾರ್, ಮಾರುತಿ ಹುಲಸ್ವಾರ್, ನಿತೇಶ್ ಎನ್.ಗೌಡ, ಆಶಿಶ್, ದರ್ಶನ್ ನಾಗೇಕರ್,ಕೃಷ್ಣ ಬಿ.ಹುಲಸ್ವಾರ್, ಧಾರೇಶ್ವರ ಹುಲಸ್ವಾರ್ ಸೇರಿದಂತೆ ಹತ್ತಾರು ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>