<p><strong>ಶಿರಸಿ: </strong>ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರ ಮೇಲೆ ಇಲ್ಲಿನ ಮಾರುಕಟ್ಟೆ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.</p>.<p>‘ಕೋವಿಡ್ 19 ಸೋಂಕಿತ (ಪಿ–5652) ವ್ಯಕ್ತಿಯು ಖತಾರ್ ದೇಶದಿಂದ ಬೆಂಗಳೂರಿಗೆ ಬಂದು, ಅಲ್ಲಿ ಸರ್ಕಾರಿ ಕ್ವಾರಂಟೈನ್ ಮುಗಿಸಿ, ನೇರವಾಗಿ ಕಾರವಾರದಲ್ಲಿರುವ ಮನೆಗೆ ಹೋಗದೇ, ಖಾಸಗಿ ಬಸ್ನಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಸಾರಿಗೆ ಸಂಸ್ಥೆ ಬಸ್ನಲ್ಲಿ ಶಿರಸಿಗೆ ಬಂದಿದ್ದಾರೆ. ಈ ವ್ಯಕ್ತಿಯ ಸಂಬಂಧಿಯಾದ ಇಲ್ಲಿನ ಮುಸ್ಲಿಂಗಲ್ಲಿಯ ಮುಜಾಮಿಲ್ ನಜೀರ್ ಶೇಖ್, ಯಾವುದೇ ಸುರಕ್ಷತಾ ಸಾಧನ ಧರಿಸದೇ, ತಮ್ಮ ಮನೆಗೆ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದಿದ್ದು, ನಂತರ ಅವರಿಬ್ಬರೂ ಶಿರಸಿಯಲ್ಲಿ ತಿರುಗಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ನಂತರ ಮೇ 31ರಂದು ಸೋಂಕಿತ ವ್ಯಕ್ತಿಯನ್ನು ಮುಜಾಮಿಲ್ ಕಾರಿನಲ್ಲಿ ಕಾರವಾರಕ್ಕೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸೋಂಕು ತಡೆಯುವಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ: </strong>ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಬ್ಬರ ಮೇಲೆ ಇಲ್ಲಿನ ಮಾರುಕಟ್ಟೆ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.</p>.<p>‘ಕೋವಿಡ್ 19 ಸೋಂಕಿತ (ಪಿ–5652) ವ್ಯಕ್ತಿಯು ಖತಾರ್ ದೇಶದಿಂದ ಬೆಂಗಳೂರಿಗೆ ಬಂದು, ಅಲ್ಲಿ ಸರ್ಕಾರಿ ಕ್ವಾರಂಟೈನ್ ಮುಗಿಸಿ, ನೇರವಾಗಿ ಕಾರವಾರದಲ್ಲಿರುವ ಮನೆಗೆ ಹೋಗದೇ, ಖಾಸಗಿ ಬಸ್ನಲ್ಲಿ ಹುಬ್ಬಳ್ಳಿಗೆ ಬಂದು, ಅಲ್ಲಿಂದ ಸಾರಿಗೆ ಸಂಸ್ಥೆ ಬಸ್ನಲ್ಲಿ ಶಿರಸಿಗೆ ಬಂದಿದ್ದಾರೆ. ಈ ವ್ಯಕ್ತಿಯ ಸಂಬಂಧಿಯಾದ ಇಲ್ಲಿನ ಮುಸ್ಲಿಂಗಲ್ಲಿಯ ಮುಜಾಮಿಲ್ ನಜೀರ್ ಶೇಖ್, ಯಾವುದೇ ಸುರಕ್ಷತಾ ಸಾಧನ ಧರಿಸದೇ, ತಮ್ಮ ಮನೆಗೆ ಸೋಂಕಿತ ವ್ಯಕ್ತಿಯನ್ನು ಕರೆದೊಯ್ದಿದ್ದು, ನಂತರ ಅವರಿಬ್ಬರೂ ಶಿರಸಿಯಲ್ಲಿ ತಿರುಗಾಡಿದ್ದಾರೆ. ಈ ಬಗ್ಗೆ ಸ್ಥಳೀಯ ಆಡಳಿತಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ನಂತರ ಮೇ 31ರಂದು ಸೋಂಕಿತ ವ್ಯಕ್ತಿಯನ್ನು ಮುಜಾಮಿಲ್ ಕಾರಿನಲ್ಲಿ ಕಾರವಾರಕ್ಕೆ ಬಿಟ್ಟು ಬಂದಿದ್ದಾರೆ. ಈ ಮೂಲಕ ಸೋಂಕು ತಡೆಯುವಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>