ಡಿ.28ರಂದು ಬಕ್ಕಳ ವನದರ್ಶನ, ಪಕ್ಷಿ ವೀಕ್ಷಣೆ, ನರ್ಸರಿ ಮಾಡುವ ವಿಧಾನ, ಕಾನ್ಮನೆ ಹಾಗೂ ಚಾರೆ ಜಡ್ಡಿ ಭೇಟಿ, ಭೀಮನಗುಡ್ಡ ಚಾರಣ, ಕೊಳ್ಳದ ಮಾಹಿತಿ, ಜೇನುಕೃಷಿ ಮಾಹಿತಿ, ಹಾವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಡಿ.29ರಂದು ಹಸಿರು ಆಹಾರ, ಪಶುವೈದ್ಯದಲ್ಲಿ ಹಸಿರು ಔಷಧ, ಸರ್ಕಾರಿ ಯೋಜನೆಗಳು, ಔಷಧ ಸಸ್ಯಗಳ ಮಾರುಕಟ್ಟೆ, ಕಸಿ ಕಟ್ಟುವುದು, ಅಂಗಾಂಶ ಕೃಷಿ, ಬೀಜದುಂಡೆ ಮಾಡುವ ಕುರಿತು ಸಮಗ್ರ ಮಾಹಿತಿ ನೀಡಲಾಗುವುದು. ಡಿ.29ರಸಂಜೆ 4.30ಕ್ಕೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಪರಿಸರ ಬರಹಗಾರ ಶಿವಾನಂದ ಕಳವೆ, ಪರಿಸರ ಕಾರ್ಯಕರ್ತ ಅಖಿಲೇಶ ಚಿಪ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು. ಮನೆಮದ್ದು ತಯಾರಕಿ ಶೋಭಾ ಹೆಗಡೆ, ಪಶುವೈದ್ಯ ಡಾ.ಗಣೇಶ ಹೆಗಡೆ, ಪ್ರಮುಖರಾದ ಚಂದ್ರು ದೇವಾಡಿಗ, ಉಮಾಪತಿ ಭಟ್ಟ, ವೀರೇಶ ನರೇಗಲ್ ಇದ್ದರು.