ಕರ್ನಾಟಕ ಲೋಕಸೇವಾ ಆಯೋಗದ ನಿಕಟಪೂರ್ವ ಅಧ್ಯಕ್ಷ ಶ್ಯಾಮ ಭಟ್ಟ ಮಾತನಾಡಿ, ‘ಕಾಲಮಿತಿ ಹಾಗೂ ಇತರ ಪ್ರದರ್ಶನಗಳ ವ್ಯಾಪ್ತಿಗೆ ಸೀಮಿತವಾಗುತ್ತಿರುವ ಯಕ್ಷಗಾನದಲ್ಲಿ ವೃತ್ತಿಪರ ಮೇಳಗಳ ಜೀವಿತಾವಧಿ ಪೂರ್ಣಗೊಳ್ಳುತ್ತಿದೆಯೇ ಎಂಬ ಭಾವನೆ ಬರುತ್ತಿದೆ. ಆದರೆ ಇಂಥ ಸಂದರ್ಭದಲ್ಲಿಯೂ ಶಾಲಾ ಮಕ್ಕಳು ಯಕ್ಷಗಾನ ಹಾಗೂ ತಾಳಮದ್ದಲೆ ಕಲಿತು ಪ್ರದರ್ಶನ ನೀಡುವುದು ಆಶಾಭಾವನೆ ಮೂಡಿಸಿದೆ’ ಎಂದರು.
ನಿವೃತ್ತ ಅಧಿಕಾರಿ ವಿ.ಆರ್.ಭಟ್ಟ, ‘ಯಕ್ಷಗಾನಕ್ಕೆ ಶಾಸ್ತ್ರೀಯತೆ, ವ್ಯಾಕರಣ ಎರಡೂ ಇದೆ. ಆದರೆ ಅದನ್ನು ಪ್ರತಿಬಿಂಬಿಸುವ ಕಾರ್ಯವಾಗಿಲ್ಲ. ಹಾಗಾಗಿ ಯಕ್ಷಗಾನ ಲಕ್ಷಣ ಗ್ರಂಥ ರಚನೆ ಆಗಬೇಕಾಗಿದೆ’ ಎಂದರು.