ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ಅವರ ಶವವನ್ನು ತರಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹಾಗಾಗಿ ಜಿಲ್ಲಾಡಳಿತದ ಮೂಲಕ ನೌಕಾಪಡೆಗೆ ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ನೌಕಾಪಡೆಯ ಅಧಿಕಾರಿಗಳು ‘ಐ.ಎನ್.ಎಸ್ ಕೋಸ್ವಾರಿ’ ಹಡಗಿನಲ್ಲಿ ಮುಳುಗು ತಜ್ಞರನ್ನು ಬುಧವಾರ ನಡುಗಡ್ಡೆಗೆ ಕಳುಹಿಸಿಕೊಟ್ಟಿದ್ದರು. ಯುವಕನ ಶವವು ಭೂಪ್ರದೇಶದಿಂದ ದೂರದಲ್ಲಿರುವ ಬಂಡೆಗಲ್ಲುಗಳ ನಡುವೆ ಸಿಲುಕಿದ್ದರಿಂದ ಕಾರ್ಯಾಚರಣೆಗೆ ಸಾಕಷ್ಟು ಶ್ರಮಿಸಬೇಕಾಯಿತು.