ಕಾರವಾರ:ಜಿಲ್ಲೆಯ ಹಳಿಯಾಳ ತಾಲ್ಲೂಕಿನ ನೇರಲಗ ಗ್ರಾಮದಲ್ಲಿ ಶನಿವಾರ ಸಂಜೆ ಸಿಡಿಲು ಬಡಿದು ರೈತ ನರಸಪ್ಪ ಜಯವಂತ ಕದಂ (60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಮ್ಮ ಹೊಲದಲ್ಲಿದ್ದ ಜಾನುವಾರಿಗೆ ಮೇವುನೀಡಲು ತೆರಳಿದ್ದಾಗ ಸಿಡಿಲು ಅಪ್ಪಳಿಸಿತು.
ಮುಂಡಗೋಡ ತಾಲ್ಲೂಕಿನಅರಶಿಣಗೇರಿ ಗ್ರಾಮದಲ್ಲಿ ಭಾರಿ ಗಾಳಿ, ಮಳೆಗೆ ಕೋಳಿ ಫಾರಂನ ಚಾವಣಿ ಬಿದ್ದು ಸುಮಾರು 5,000 ಕೋಳಿಗಳು ಸತ್ತಿವೆ. ಸ್ಥಳೀಯ ನಿವಾಸಿ ಹಜರತ್ ಅಲಿತಮ್ಮ ಹೊಲದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದರು. ಈಅವಘಡದಲ್ಲಿ ಸುಮಾರು ₹ 15 ಲಕ್ಷದಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಭಾರಿ ಗಾಳಿಯಿಂದಾಗಿಇದೇ ಗ್ರಾಮದಲ್ಲಿ 15ರಿಂದ 20 ಎಕರೆಗಳಷ್ಟು ಬಾಳೆ ಮತ್ತು ಮಾವಿನ ತೋಟಕ್ಕೆ ಅಪಾರ ಹಾನಿಯಾಗಿದೆ. ಬಾಳೆ ಗಿಡಗಳು ಮುರಿದು ಬಿದ್ದಿವೆ.ಫಸಲಿಗೆ ಬಂದಿದ್ದ ಮಾವು ಬೆಳೆಯೂ ನೆಲಕಚ್ಚಿದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ತಾಲ್ಲೂಕಿನ ಹುನಗುಂದ ಗ್ರಾಮದಲ್ಲಿ ಸಿಡಿಲು ಬಡಿದು ಒಂದು ಎತ್ತು ಸತ್ತಿದೆ.ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆಗಳ ಮೇಲೆ ಹೊದಿಸಲಾಗಿದ್ದ ಸಿಮೆಂಟ್, ಕಬ್ಬಿಣದ ಶೀಟ್ಗಳು ಹಾರಿಹೋಗಿವೆ. ಇಂದೂರುಗ್ರಾಮದಲ್ಲಿ ಏಳೆಂಟು ಮನೆಗಳಚಾವಣಿಯ ಶೀಟ್ಗಳುಹಾರಿ ಹೋಗಿವೆ.
ಹಳಿಯಾಳ ಪಟ್ಟಣದಲ್ಲೂ ಅರ್ಧ ಗಂಟೆ ರಭಸದ ಗಾಳಿ ಮಳೆಯಾಗಿದ್ದು, ಹತ್ತಾರು ವಿದ್ಯುತ್ ಕಂಬಗಳು, ತೆಂಗಿನ ಮರಗಳು ಮುರಿದುಬಿದ್ದಿವೆ. ಶಿರಸಿ, ಸಿದ್ದಾಪುರ, ಯಲ್ಲಾಪುರಸುತ್ತಮುತ್ತ ದಟ್ಟವಾದ ಮೋಡ ಕವಿದು, ನಾಲ್ಕಾರು ಹನಿ ತುಂತುರು ಮಳೆಯಾಯಿತು.
ಹಳಿಯಾಳದಲ್ಲಿ ಶನಿವಾರ ಸಂಜೆ ಸುರಿದ ಗಾಳಿ, ಮಳೆಗೆ ತೆಂಗಿನಮರವೊಂದು ಮುರಿದು ಬಿದ್ದಿರುವುದು.