ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಹೋಳಿ ಹುಣ್ಣಿಮೆ ಮುನ್ನಾದಿನಗಳಲ್ಲಿ ಬೇಡರವೇಷ ಎಂಬ ವಿಶಿಷ್ಟ ಜನಪದೀಯ ಆಚರಣೆ ನಡೆಯುತ್ತದೆ. ಶಿರಸಿ ಮಾರಿಕಾಂಬ ಜಾತ್ರೆ ಇಲ್ಲದ ವರ್ಷ ಅಂದರೆ ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಬೇಡರ ಕುಣಿತವನ್ನ ಕಾಣಲು ಬೇರೆ ಬೇರೆ ಜಿಲ್ಲೆ, ಹೊರ ರಾಜ್ಯಗಳಿಂದಲೂ ಜನ ಬರುತ್ತಾರೆ. ಬೇಡರ ವೇಷಧಾರಿಗಳ ರೌದ್ರತೆ, ಅವರು ಹಾಕುವ ಕೇಕೆ, ತಮಟೆಯ ಸದ್ದು ಜನರನ್ನು ಕೂಡಾ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ.