<p><em><strong>ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ <span style="color:#c0392b;">ಶಿವರಾಮ ಹೆಬ್ಬಾರ್</span> ಅವರಿಗೆ ಉಪಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಹುಮ್ಮಸ್ಸು ಇದೆ. ಇದೇ ಉತ್ಸಾಹದಲ್ಲಿ ಅವರು ಪ್ರಜಾವಾಣಿಗೆ ವಿಶೇಷ ಸಂದರ್ಶನ ನೀಡಿದರು.</strong></em></p>.<p><strong>* ಮಧ್ಯಂತರ ಚುನಾವಣೆಗೆ ನೀವು ಕಾರಣರಾದಿರಿ ಎಂಬ ಅಸಮಾಧಾನ ಜನರಲ್ಲಿದೆ. ಹೇಗೆ ಸಮರ್ಥಿಸಿಕೊಳ್ಳುತ್ತೀರಿ?</strong></p>.<p>ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣ ಎಂಬ ಭಾವನೆ ಜನರಲ್ಲಿದೆ. ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎಲ್ಲೂ ಜನರು ಯಾಕಾಗಿ ರಾಜೀನಾಮೆ ಕೊಟ್ಟಿದ್ದೀರಿ ಎಂದು ಕೇಳಿಲ್ಲ. ಯಾಕೆ ಚುನಾವಣೆ ಬಂತು ಎಂದೂ ಕೇಳಿಲ್ಲ.</p>.<p><strong>* ಈ ಉಪಚುನಾವಣೆಗೆ ಕಾರಣರಾಗುವಮೂಲಕ ನೀವು ಕ್ಷೇತ್ರದ ಜನರಿಗೆ ದ್ರೋಹ ಮಾಡಿದಂತಾಗಿಲ್ಲವೇ?</strong></p>.<p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ವಿಶೇಷ ಉದಾಹರಣೆ ಅಲ್ಲ. ಇಂತಹ ಅನೇಕ ಸಂದರ್ಭಗಳು ಈ ಹಿಂದೆ ಘಟಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/bhimanna-naik-interview-686683.html" target="_blank">ಯಲ್ಲಾಪುರಜೆಡಿಎಸ್ ಅಭ್ಯರ್ಥಿಭೀಮಣ್ಣ ನಾಯ್ಕ ಸಂದರ್ಶನ</a></p>.<p><strong>* ಪ್ರವಾಹಕ್ಕೆ ತುತ್ತಾಗಿರುವ ಕ್ಷೇತ್ರ ಇದು. ಇಲ್ಲಿ ಮತ್ತೆ ಚುನಾವಣೆ ಬೇಕಿತ್ತಾ?</strong></p>.<p>ಈಗೇನು ನೆರೆ ಇಲ್ಲವಲ್ಲ. ನೆರೆಯಲ್ಲಿ ನಷ್ಟವಾಗಿರುವುದನ್ನು ಸರಿದೂಗಿಸುವ ಕಾರ್ಯಗಳು ಆಗುತ್ತಿವೆ. ಜನರಿಗೆ ಪರಿಹಾರವೂ ಸಿಗುತ್ತಿದೆ. ನನ್ನ ಕ್ಷೇತ್ರದಲ್ಲಿ ನೆರೆಯಿಂದ ಆಗಿರುವ ಹಾನಿಗೆ ₹ 43 ಕೋಟಿ ನೆರವು ತಂದಿದ್ದೇನೆ. ಒಡೆದಿದ್ದ ಚಿಗಳ್ಳಿ ಅಣೆಕಟ್ಟು ಮರುನಿರ್ಮಾಣ ಕಾರ್ಯ ₹ 9 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ನಾಲ್ಕು ಸೇತುವೆಗಳು ಹಾಳಾಗಿದ್ದವು. ಅವುಗಳ ಕಾಮಗಾರಿ ಕೂಡ ನಡೆಯುತ್ತಿದೆ. ಏನು ಆಗಬೇಕೊ ಅವೆಲ್ಲವೂ ನಡೆಯುತ್ತಲೇ ಇವೆ.</p>.<p><strong>* ಯಾವ ವಿಚಾರ ಮುಂದಿಟ್ಟು ಮತ ಕೇಳಲು ಜನರ ಮುಂದೆ ಹೋಗುತ್ತೀರಿ?</strong></p>.<p>ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಆಗಿರುವ ಅನ್ಯಾಯ. ಮೈಸೂರು, ಮಂಡ್ಯ, ಹಾಸನ, ತುಮಕೂರಿಗೆ ಅನುದಾನಗಳೆಲ್ಲವೂ ಹೋಗುತ್ತಿದ್ದವು. ಕೆಲವರಿಗೆ ಮಾತ್ರ ಈ ಸರ್ಕಾರ ಎನ್ನುವ ಪರಿಸ್ಥಿತಿಯನ್ನು ಸಚಿವ ಸಂಪುಟ ನಿರ್ಮಾಣ ಮಾಡಿದ್ದರಿಂದ, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ಹೋಗಬೇಕಾಯಿತು.</p>.<p><strong>* ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವ ತೃಪ್ತಿ ಇದೆಯೇ ?</strong></p>.<p>ನೂರಕ್ಕೆ 110 ಪ್ರತಿಶತ ಸಮಾಧಾನವಿದೆ. ಅದೇ ನನಗಿರುವ ಧೈರ್ಯ ಕೂಡ. ಆ ಕಾರಣಕ್ಕಾಗಿಯೇ ನಾನು ಜನರನ್ನು ಎದುರಿಸುತ್ತೇನೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/karnataka-bypolls-bjp-congress-jds-683800.html" target="_blank">ಯಲ್ಲಾಪುರ– ಜಾತಿ ಲೆಕ್ಕಾಚಾರದಲ್ಲಿ ಮತ ಹೊಂಚು</a></p>.<p><strong>* ಜನ ಯಾಕಾಗಿ ನಿಮ್ಮನ್ನು ಪುನರಾಯ್ಕೆ ಮಾಡಬೇಕು?</strong></p>.<p>ನಾನೊಬ್ಬ ಒಳ್ಳೆಯ ಅಭ್ಯರ್ಥಿ, ಒಳ್ಳೆಯ ಕೆಲಸಗಾರ ಎನ್ನುವ ಕಾರಣಕ್ಕಾಗಿ, ಬಡವರನ್ನು ಪ್ರೀತಿಯಿಂದ ನೋಡುತ್ತಾನೆ. ಎಂತಹ ಕಷ್ಟದಲ್ಲಿದ್ದವರನ್ನೂ ಮಾತನಾಡಿಸುತ್ತಾನೆ ಎನ್ನುವ ಕಾರಣಕ್ಕೆ ಜನರು ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ.</p>.<p><strong>* ನಿರೀಕ್ಷಿಸಿದಷ್ಟು ಕಾರ್ಯಕರ್ತರು ನಿಮ್ಮ ಜೊತೆ ಬಿಜೆಪಿಗೆ ಬಂದ ಹಾಗಿಲ್ಲವಲ್ಲ...</strong></p>.<p>ಡಿ.9ರ ಫಲಿತಾಂಶದ ದಿನ ಮತಪೆಟ್ಟಿಗೆ ಒಡೆದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಇದರ ಅರಿವಾಗಬಹುದು.</p>.<p><strong>* ಆಯ್ಕೆಯಾದರೆ ಕ್ಷೇತ್ರದಲ್ಲಿ ಪ್ರಮುಖ ಆದ್ಯತೆ...?</strong></p>.<p>ದೇಶಕ್ಕೆ ಅನ್ನಕೊಡುವ ಅನ್ನದಾತ ಸುಖವಾಗಿರಲು ಬೇಕಾದ ಎಲ್ಲ ಯೋಜನೆಗಳೂ ನನ್ನ ಆದ್ಯತೆಗಳೇ. ಕೃಷಿ, ಶಿಕ್ಷಣ, ಆರೋಗ್ಯ ಈ ಮೂರು ವಿಚಾರವಾಗಿ ವಿಶೇಷ ಲಕ್ಷ್ಯವಹಿಸುತ್ತೇನೆ. ಬಡವರಿಗೆ ಆರೋಗ್ಯ ಸಿಗಬೇಕು. ಕಟ್ಟಕಡೆಯ ಮನುಷ್ಯನಿಗೆ ಶಿಕ್ಷಣ ಸಿಗಬೇಕು. ಅನ್ನದಾತನ ರಕ್ಷಣೆಯಾಗಬೇಕು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/jds-has-become-weak-in-yellapura-constituency-685689.html" target="_blank">ಯಲ್ಲಾಪುರ–ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಜೆಡಿಎಸ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><em><strong>ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ <span style="color:#c0392b;">ಶಿವರಾಮ ಹೆಬ್ಬಾರ್</span> ಅವರಿಗೆ ಉಪಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಹುಮ್ಮಸ್ಸು ಇದೆ. ಇದೇ ಉತ್ಸಾಹದಲ್ಲಿ ಅವರು ಪ್ರಜಾವಾಣಿಗೆ ವಿಶೇಷ ಸಂದರ್ಶನ ನೀಡಿದರು.</strong></em></p>.<p><strong>* ಮಧ್ಯಂತರ ಚುನಾವಣೆಗೆ ನೀವು ಕಾರಣರಾದಿರಿ ಎಂಬ ಅಸಮಾಧಾನ ಜನರಲ್ಲಿದೆ. ಹೇಗೆ ಸಮರ್ಥಿಸಿಕೊಳ್ಳುತ್ತೀರಿ?</strong></p>.<p>ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ಪಕ್ಷದ ನಾಯಕರೇ ಕಾರಣ ಎಂಬ ಭಾವನೆ ಜನರಲ್ಲಿದೆ. ನಿರಂತರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಪ್ರಚಾರಕ್ಕೆ ಹೋದ ಸಂದರ್ಭದಲ್ಲಿ ಎಲ್ಲೂ ಜನರು ಯಾಕಾಗಿ ರಾಜೀನಾಮೆ ಕೊಟ್ಟಿದ್ದೀರಿ ಎಂದು ಕೇಳಿಲ್ಲ. ಯಾಕೆ ಚುನಾವಣೆ ಬಂತು ಎಂದೂ ಕೇಳಿಲ್ಲ.</p>.<p><strong>* ಈ ಉಪಚುನಾವಣೆಗೆ ಕಾರಣರಾಗುವಮೂಲಕ ನೀವು ಕ್ಷೇತ್ರದ ಜನರಿಗೆ ದ್ರೋಹ ಮಾಡಿದಂತಾಗಿಲ್ಲವೇ?</strong></p>.<p>ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ವಿಶೇಷ ಉದಾಹರಣೆ ಅಲ್ಲ. ಇಂತಹ ಅನೇಕ ಸಂದರ್ಭಗಳು ಈ ಹಿಂದೆ ಘಟಿಸಿವೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/bhimanna-naik-interview-686683.html" target="_blank">ಯಲ್ಲಾಪುರಜೆಡಿಎಸ್ ಅಭ್ಯರ್ಥಿಭೀಮಣ್ಣ ನಾಯ್ಕ ಸಂದರ್ಶನ</a></p>.<p><strong>* ಪ್ರವಾಹಕ್ಕೆ ತುತ್ತಾಗಿರುವ ಕ್ಷೇತ್ರ ಇದು. ಇಲ್ಲಿ ಮತ್ತೆ ಚುನಾವಣೆ ಬೇಕಿತ್ತಾ?</strong></p>.<p>ಈಗೇನು ನೆರೆ ಇಲ್ಲವಲ್ಲ. ನೆರೆಯಲ್ಲಿ ನಷ್ಟವಾಗಿರುವುದನ್ನು ಸರಿದೂಗಿಸುವ ಕಾರ್ಯಗಳು ಆಗುತ್ತಿವೆ. ಜನರಿಗೆ ಪರಿಹಾರವೂ ಸಿಗುತ್ತಿದೆ. ನನ್ನ ಕ್ಷೇತ್ರದಲ್ಲಿ ನೆರೆಯಿಂದ ಆಗಿರುವ ಹಾನಿಗೆ ₹ 43 ಕೋಟಿ ನೆರವು ತಂದಿದ್ದೇನೆ. ಒಡೆದಿದ್ದ ಚಿಗಳ್ಳಿ ಅಣೆಕಟ್ಟು ಮರುನಿರ್ಮಾಣ ಕಾರ್ಯ ₹ 9 ಕೋಟಿ ವೆಚ್ಚದಲ್ಲಿ ನಡೆಯುತ್ತಿದೆ. ನಾಲ್ಕು ಸೇತುವೆಗಳು ಹಾಳಾಗಿದ್ದವು. ಅವುಗಳ ಕಾಮಗಾರಿ ಕೂಡ ನಡೆಯುತ್ತಿದೆ. ಏನು ಆಗಬೇಕೊ ಅವೆಲ್ಲವೂ ನಡೆಯುತ್ತಲೇ ಇವೆ.</p>.<p><strong>* ಯಾವ ವಿಚಾರ ಮುಂದಿಟ್ಟು ಮತ ಕೇಳಲು ಜನರ ಮುಂದೆ ಹೋಗುತ್ತೀರಿ?</strong></p>.<p>ಸಮ್ಮಿಶ್ರ ಸರ್ಕಾರದಲ್ಲಿ ನಮಗೆ ಆಗಿರುವ ಅನ್ಯಾಯ. ಮೈಸೂರು, ಮಂಡ್ಯ, ಹಾಸನ, ತುಮಕೂರಿಗೆ ಅನುದಾನಗಳೆಲ್ಲವೂ ಹೋಗುತ್ತಿದ್ದವು. ಕೆಲವರಿಗೆ ಮಾತ್ರ ಈ ಸರ್ಕಾರ ಎನ್ನುವ ಪರಿಸ್ಥಿತಿಯನ್ನು ಸಚಿವ ಸಂಪುಟ ನಿರ್ಮಾಣ ಮಾಡಿದ್ದರಿಂದ, ನಾವು ಕ್ಷೇತ್ರದ ಅಭಿವೃದ್ಧಿಗಾಗಿ ಚುನಾವಣೆಗೆ ಹೋಗಬೇಕಾಯಿತು.</p>.<p><strong>* ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿರುವ ತೃಪ್ತಿ ಇದೆಯೇ ?</strong></p>.<p>ನೂರಕ್ಕೆ 110 ಪ್ರತಿಶತ ಸಮಾಧಾನವಿದೆ. ಅದೇ ನನಗಿರುವ ಧೈರ್ಯ ಕೂಡ. ಆ ಕಾರಣಕ್ಕಾಗಿಯೇ ನಾನು ಜನರನ್ನು ಎದುರಿಸುತ್ತೇನೆ.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/karnataka-bypolls-bjp-congress-jds-683800.html" target="_blank">ಯಲ್ಲಾಪುರ– ಜಾತಿ ಲೆಕ್ಕಾಚಾರದಲ್ಲಿ ಮತ ಹೊಂಚು</a></p>.<p><strong>* ಜನ ಯಾಕಾಗಿ ನಿಮ್ಮನ್ನು ಪುನರಾಯ್ಕೆ ಮಾಡಬೇಕು?</strong></p>.<p>ನಾನೊಬ್ಬ ಒಳ್ಳೆಯ ಅಭ್ಯರ್ಥಿ, ಒಳ್ಳೆಯ ಕೆಲಸಗಾರ ಎನ್ನುವ ಕಾರಣಕ್ಕಾಗಿ, ಬಡವರನ್ನು ಪ್ರೀತಿಯಿಂದ ನೋಡುತ್ತಾನೆ. ಎಂತಹ ಕಷ್ಟದಲ್ಲಿದ್ದವರನ್ನೂ ಮಾತನಾಡಿಸುತ್ತಾನೆ ಎನ್ನುವ ಕಾರಣಕ್ಕೆ ಜನರು ನನ್ನನ್ನು ಆಯ್ಕೆ ಮಾಡುವ ವಿಶ್ವಾಸವಿದೆ.</p>.<p><strong>* ನಿರೀಕ್ಷಿಸಿದಷ್ಟು ಕಾರ್ಯಕರ್ತರು ನಿಮ್ಮ ಜೊತೆ ಬಿಜೆಪಿಗೆ ಬಂದ ಹಾಗಿಲ್ಲವಲ್ಲ...</strong></p>.<p>ಡಿ.9ರ ಫಲಿತಾಂಶದ ದಿನ ಮತಪೆಟ್ಟಿಗೆ ಒಡೆದಾಗ ಕಾಂಗ್ರೆಸ್ ಕಾರ್ಯಕರ್ತರಿಗೆ ಇದರ ಅರಿವಾಗಬಹುದು.</p>.<p><strong>* ಆಯ್ಕೆಯಾದರೆ ಕ್ಷೇತ್ರದಲ್ಲಿ ಪ್ರಮುಖ ಆದ್ಯತೆ...?</strong></p>.<p>ದೇಶಕ್ಕೆ ಅನ್ನಕೊಡುವ ಅನ್ನದಾತ ಸುಖವಾಗಿರಲು ಬೇಕಾದ ಎಲ್ಲ ಯೋಜನೆಗಳೂ ನನ್ನ ಆದ್ಯತೆಗಳೇ. ಕೃಷಿ, ಶಿಕ್ಷಣ, ಆರೋಗ್ಯ ಈ ಮೂರು ವಿಚಾರವಾಗಿ ವಿಶೇಷ ಲಕ್ಷ್ಯವಹಿಸುತ್ತೇನೆ. ಬಡವರಿಗೆ ಆರೋಗ್ಯ ಸಿಗಬೇಕು. ಕಟ್ಟಕಡೆಯ ಮನುಷ್ಯನಿಗೆ ಶಿಕ್ಷಣ ಸಿಗಬೇಕು. ಅನ್ನದಾತನ ರಕ್ಷಣೆಯಾಗಬೇಕು.</p>.<p><strong>ಇದನ್ನೂ ಓದಿ:</strong><a href="https://www.prajavani.net/district/uthara-kannada/jds-has-become-weak-in-yellapura-constituency-685689.html" target="_blank">ಯಲ್ಲಾಪುರ–ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾದ ಜೆಡಿಎಸ್</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>