‘ಬೈತಕೋಲದ ಮೀನುಗಾರಿಕೆ ಬಂದರು ಪ್ರದೇಶದಿಂದ ಮಾತ್ರ ದೋಣಿಗಳು ಸಂಚರಿಸಬಹುದು. ಕಡವಾಡ ಗ್ರಾಮದಿಂದ ದೇವರ ಮೂರ್ತಿ ಮೆರವಣಿಗೆಯಲ್ಲಿ ಒಯ್ಯಲು, ಜಾತ್ರೆ ಆಚರಣೆಗೆ ತೆರಳುವವರಿಗೆ ಮೂರು ದೋಣಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಕೋಡಿಬಾಗ, ಕಾರವಾರ ಕಡಲತೀರದಿಂದ ಸಾಗಲು ಅವಕಾಶ ಇಲ್ಲ. ಲೈಫ್ ಜಾಕೆಟ್ ಧರಿಸುವುದನ್ನು ಕಡ್ಡಾಯಗೊಳಿಸಬೇಕು. ದ್ವೀಪಕ್ಕೆ ತೆರಳುವ ಪ್ರತಿ ದೋಣಿಗಳನ್ನು ಪರಿಶೀಲಿಸಬೇಕು ಎಂದು ಬಂದರು ಇಲಾಖೆ, ಕರಾವಳಿ ಕಾವಲು ಪಡೆ ಅಧಿಕಾರಿಗಳಿಗೆ ಸೂಚಿಸಿದರು.