ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹಿಲ್ಲೂರ, ಮೃದಂಗವಾದಕರಾಗಿ ಗಜಾನನ ಭಂಡಾರಿ ಬೋಳಗೆರೆ, ಚಂಡೆವಾದಕರಾಗಿ ಲಕ್ಷ್ಮೀನಾರಾಯಣ ಸಂಪ ಹಾಗೂ ಶ್ರೀರಮಣ ಮೂರೂರು ಸಹಕರಿಸಿದರು. ಭರತನಾಗಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಧರ್ಮಾಂಗದನಾಗಿ ಗಣಪತಿ ಹೆಗಡೆ ತೋಟಿಮನೆ, ಬಲಿಚಕ್ರವರ್ತಿಯಾಗಿ ನಾಗೇಶ ಗೌಡ ಕುಳಿಮನೆ, ನಾರದನಾಗಿ ಅಶೋಕ ಭಟ್ಟ ಸಿದ್ದಾಪುರ, ವಿಷ್ಣುವಾಗಿ ಮಾರುತಿ ನಾಯ್ಕ, ದೂತನಾಗಿ ಹಾಸ್ಯಗಾರ ಚಪ್ಪರಮನೆ ಶ್ರೀಧರ ಹೆಗಡೆ, ನೇಪಥ್ಯದಲ್ಲಿ ಲಕ್ಷ್ಮಣ ನಾಯ್ಕ ಪಾಲ್ಗೊಂಡಿದ್ದರು.