‘ಮಾದರಿ ರಂಗಮಂದಿರ ನಿರ್ಮಾಣವಾಗಲಿ’
‘ರಾಜ್ಯದ ಗಡಿಭಾಗದಲ್ಲಿರುವ ಕಾರವಾರದಲ್ಲಿ ಸಾಂಸ್ಕೃತಿಕ ಕಲಾತ್ಮಕ ಚಟುವಟಿಕೆಗೆ ಪೂರಕವಾಗಿರುವ ಜಿಲ್ಲಾ ರಂಗಮಂದಿರ ಶಿಥಿಲಾವಸ್ಥೆಗೆ ತಲುಪಿದೆ ಎಂಬುದು ಬೇಸರದ ವಿಚಾರ. ನಿರ್ಮಾಣಗೊಂಡು ಹೆಚ್ಚು ಸಮಯವಾಗದಿದ್ದರೂ ಕಟ್ಟಡವು ಬಳಕೆಗೆ ಬಾರದಿರುವುದು ವ್ಯವಸ್ಥೆಯ ದೋಷಕ್ಕೆ ಹಿಡಿದ ಕೈಗನ್ನಡಿ’ ಎಂದು ಕಲಾವಿದರಾದ ಅನಿಲ ಮಡಿವಾಳ ದೀಪಕ ಹಳದಿಪುರಕರ ಇತರರು ಬೇಸರ ವ್ಯಕ್ತಪಡಿಸಿದ್ದಾರೆ. ‘ಹೊಸದಾಗಿ ಕಟ್ಟಡ ನಿರ್ಮಿಸಲು ವಿಳಂಬ ಮಾಡಬಾರದು. ಹೊಸ ರಂಗಮಂದಿರವು ಕಲೆ ಸಾಂಸ್ಕೃತಿಕ ಚಟುವಟಿಕೆಗೆ ಪೂರಕವಾಗಿರಬೇಕು. ರಾಜ್ಯದಲ್ಲೇ ಮಾದರಿ ರಂಗಮಂದಿರವಾಗಿ ರೂಪುಗೊಳಿಸಬೇಕು’ ಎಂದು ಒತ್ತಾಯಿಸಿದ್ದಾರೆ.