ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಜನತಾ ದರ್ಶನ | ‘ಗ್ಯಾರಂಟಿ’ ವಿರುದ್ಧ ದೂರು: ಸಮಸ್ಯೆ ಪರಿಹಾರಕ್ಕೆ 10 ದಿನದ ಗಡುವು

Published : 1 ಡಿಸೆಂಬರ್ 2023, 15:16 IST
Last Updated : 1 ಡಿಸೆಂಬರ್ 2023, 15:16 IST
ಫಾಲೋ ಮಾಡಿ
Comments
ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಹೊನ್ನಾವರದ ಪ್ರಭಾತ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಭೂಮಿಗೆ ಮಂಜೂರಾದ ಜಾಗದ ಹಕ್ಕುಪತ್ರವನ್ನು ಸಮುದಾಯದ ಪ್ರಮುಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕರಾದ ಭೀಮಣ್ಣ ನಾಯ್ಕ ಸತೀಶ ಸೈಲ್ ಹಸ್ತಾಂತರಿಸಿದರು
ಕಾರವಾರದಲ್ಲಿ ನಡೆದ ಜಿಲ್ಲಾಮಟ್ಟದ ಜನತಾ ದರ್ಶನದಲ್ಲಿ ಹೊನ್ನಾವರದ ಪ್ರಭಾತ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಸ್ಮಶಾನ ಭೂಮಿಗೆ ಮಂಜೂರಾದ ಜಾಗದ ಹಕ್ಕುಪತ್ರವನ್ನು ಸಮುದಾಯದ ಪ್ರಮುಖರಿಗೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಶಾಸಕರಾದ ಭೀಮಣ್ಣ ನಾಯ್ಕ ಸತೀಶ ಸೈಲ್ ಹಸ್ತಾಂತರಿಸಿದರು
20 ವರ್ಷದ ಸಮಸ್ಯೆಗೆ ಎರಡು ತಿಂಗಳಲ್ಲಿ ಪರಿಹಾರ
ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಮೊದಲ ಜನತಾ ದರ್ಶನದಲ್ಲಿ ಅಂಕೋಲಾದ ಬೊಗ್ರಿಬೈಲ್ ಹೊನ್ನಾವರ ಪಟ್ಟಣದ ಪ್ರಭಾತ ನಗರದ ಕ್ರಿಶ್ಚಿಯನ್ ಸಮುದಾಯದ ಜನರು ಸ್ಮಶಾನ ಭೂಮಿಗೆ ಜಾಗ ಸಿಗದ ಸಮಸ್ಯೆಯ ಬಗ್ಗೆ ದೂರು ನೀಡಿದ್ದರು. ಎರಡು ದಶಕಗಳಿಂದ ಜಾಗಕ್ಕೆ ಪ್ರಯತ್ನಿಸುತ್ತಿದ್ದರೂ ಪರಿಹರ ಸಿಗುತ್ತಿಲ್ಲ ಎಂದು ಬೇರಿಸಿದ್ದರು. ಅವರಿಗೆ ತಲಾ ನಾಲ್ಕು ಗುಂಟೆ ಜಮೀನು ಮಂಜೂರು ಮಾಡಿ ಹಕ್ಕುಪತ್ರ ನೀಡಲಾಯಿತು. ಅಲ್ಲದೆ ಉದ್ಯೋಗಕ್ಕಾಗಿ ಮನವಿ ಮಾಡಿದ್ದ ಮೂವರಿಗೆ ಪ್ರವಾಸೋದ್ಯಮ ಇಲಾಖೆಯಲ್ಲಿ ಹೊರಗುತ್ತಿಗೆ ಅಡಿ ಕೆಲಸದ ನೇಮಕಾತಿ ಪತ್ರ ನೀಡಲಾಯಿತು. ಕುಮಟಾದ ಆಡಳಿತ ಸೌಧ ಆವರಣದಲ್ಲಿ ಅಂಗವಿಕಲರೊಬ್ಬರಿಗೆ ಮಿಲ್ಕ್ ಪಾರ್ಲರ್ ನಡೆಸಲು ಅನುಮತಿ ಪತ್ರ ನೀಡಲಾಯಿತು.
₹180 ಕೋಟಿ ವೆಚ್ಚದಲ್ಲಿ ಆಸ್ಪತ್ರೆ
‘ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಕಾರವಾರದಲ್ಲಿರುವ ಕ್ರಿಮ್ಸ್ ಸಂಸ್ಥೆಯನ್ನು ₹180 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲು ಕ್ರಿಯಾಯೋಜನೆ ಸಿದ್ಧಪಡಿಸಲಾಗಿದೆ. ಕ್ಯಾಥಲ್ಯಾಬ್ ನರರೋಗ ವಿಭಾಗ ಸೇರಿದಂತೆ ಪ್ರಮುಖ ಸೌಲಭ್ಯಗಳನ್ನು ಒಳಗೊಂಡ ಯೋಜನೆ ಇದಾಗಿದ್ದು ವಿಧಾನಸಭೆ ಅಧಿವೇಶನದಲ್ಲಿಯೂ ಈ ವಿಷಯದ ಕುರಿತು ಚರ್ಚಿಸಲಾಗುವುದು’ ಎಂದು ಶಾಸಕ ಸತೀಶ ಸೈಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT