‘ವಿಲೇವಾರಿ ಘಟಕದಲ್ಲಿ ದಾಸ್ತಾನು ಮಾಡಿದ ಸತ್ತ ಪ್ರಾಣಿಗಳ ಕಳೇಬರ, ಮಾಂಸ ತ್ಯಾಜ್ಯಗಳನ್ನು ಕಾಗೆ, ಹದ್ದುಗಳು ಹೊರಗೆ ಹೊತ್ತೊಯ್ಯುತ್ತವೆ. ಸುತ್ತಲ ಪ್ರದೇಶಗಳ ಮನೆಗಳ ಮೇಲೆ, ಬಾವಿಯೊಳಗೆ ಕಳೇಬರದ ತುಂಡು ಬಿದ್ದು ನೀರು ಮಲೀನಗೊಂಡಿರುವ ಉದಾಹರಣೆ ಸಾಕಷ್ಟಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ನಗರಸಭೆ ಗಮನಹರಿಸಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಕಿಶೋರ ಶೇಜವಾಡಕರ್ ಆಗ್ರಹಿಸಿದರು.