ಮುಂಡಗೋಡ: ‘ಕೆರೆಯಿಂದ ಮಣ್ಣನ್ನು ತಂದು ಅದಕ್ಕೊಂದು ರೂಪ ನೀಡುತ್ತೇವೆ. ಸಂಪ್ರದಾಯದಂತೆ ಪೂಜಿಸಿ ಮರಳಿ ಕೆರೆಗೆ ಬಿಟ್ಟಾಗ, ಮೊದಲಿನ ರೂಪದಲ್ಲಿಯೇ ಮಣ್ಣು ನೀರಿಗೆ ಸೇರುವಂತಿರಬೇಕು. ರಾಸಾಯನಿಕ ಬಳಿದು ವಿಸರ್ಜಿಸಿದರೆ ನೀರು ಕಲುಷಿತಗೊಂಡು, ಪರಿಸರ ಹಾನಿಗೆ ನಮ್ಮ ಕೊಡುಗೆ ನೀಡಿದಂತಾಗುತ್ತದೆ’ ಎನ್ನುತ್ತಾರೆ ಮೂರ್ತಿ ಕಲಾವಿದ ಮೌನೇಶಪ್ಪ ಬಡಿಗೇರ.