ನಾಲ್ಕೈದು ದಿನಗಳ ಹಿಂದೆ ಕಿರವತ್ತಿ ಮೂಲಕ ತಾಲ್ಲೂಕಿಗೆ ಗಜಪಡೆ ಆಗಮಿಸಿದ್ದು, ಉಗ್ಗಿನಕೇರಿ, ಮೈನಳ್ಳಿ, ಕಳಕಿಕಾರೆ, ಚವಡಳ್ಳಿ, ಕರವಳ್ಳಿ, ಬ್ಯಾನಳ್ಳಿ, ತಮ್ಯಾನಕೊಪ್ಪ ಗ್ರಾಮಗಳ ವ್ಯಾಪ್ತಿಯಲ್ಲಿ ತೋಟ,ಗದ್ದೆಗಳಿಗೆ ಕಾಡಾನೆಗಳು ಲಗ್ಗೆಯಿಟ್ಟಿವೆ. ಕೆಲವೆಡೆ ಅಡಿಕೆ, ಬಾಳೆ ಗಿಡಗಳನ್ನು ಮುರಿದು ಹಾಕಿದ್ದರೆ, ಉಳಿದೆಡೆ ಭತ್ತವನ್ನು ತಿಂದು, ತುಳಿದು ಹಾನಿ ಮಾಡಿವೆ.