`ಇವರು ಗುರುವಾರ ಸಂಜೆ 4 ಗಂಟೆಯ ಸುಮಾರಿಗೆ ಬೇಡ್ತಿ ನದಿ ಹರಿಯುವ ಅಪ್ಪೆಕೊಡಿ ಸಮೀಪ ನಿಂತ ನೀರಲ್ಲಿ ಮೀನು ಹಿಡಿಯಲು ಹೋಗಿದ್ದರು. ರಾತ್ರಿಯಾದರೂ ಮನೆಗೆ ಬರದಿದ್ದರಿಂದ ಅನುಮಾನಗೊಂಡು ಹುಡುಕಾಟ ನಡೆಸಿದಾಗ ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು ತಿಳಿಯಿತು. ನದಿ ನೀರಲ್ಲಿ ಬಿದ್ದವರ ಮೃತದೇಹವನ್ನು ಊರಿನವರೇ ಆದ ಹಸನಸಾಬ ಮುಜಾವರ, ನಿಸ್ಸಾರ ಜಂಡೆವಾಲೆ, ಮಂಚಿಕೇರಿಯ ಖಲೀಲ ಮೊದಲಾದವರು ನೀರಿನಿಂದ ಮೇಲಕ್ಕೆ ತಂದು ನದಿಯ ದಡದಲ್ಲಿ ಇಟ್ಟಿದ್ದಾರೆ’ ಎಂದು ಹಳ್ಳಿಗದ್ದೆಯ ಮಮ್ತಾಜಬಿ ಕಲಂದರ ಸಾಬ ಯಲ್ಲಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.