ಕಾರವಾರ: ಎಂಜಿನ್ ಸಮಸ್ಯೆ, ಸಮುದ್ರದ ಅಲೆಗಳ ಅಬ್ಬರಕ್ಕೆ ದಡದಿಂದ 30 ನಾಟಿಕಲ್ ಮೈಲು ದೂರಕ್ಕೆ ಸಾಗಿ ಸಂಪರ್ಕ ಕಡಿತಗೊಂಡಿದ್ದ ಗೋವಾದ ಪಣಜಿಯ ಕ್ರಿಸ್ಟೊ ರೇ ಹೆಸರಿನ ಮೀನುಗಾರಿಕೆ ದೋಣಿಯನ್ನು ತಟರಕ್ಷಕ ಪಡೆಯು ಮಂಗಳವಾರ ಸುರಕ್ಷಿತವಾಗಿ ಇಲ್ಲಿನ ವಾಣಿಜ್ಯ ಬಂದರಿಗೆ ಕರೆತಂದಿದೆ. ಆರು ದಿನಗಳಿಂದ ಸಂಪರ್ಕ ಸಿಗದೆ ಆತಂಕಕ್ಕೆ ಒಳಗಾಗಿದ್ದ ದೋಣಿಯಲ್ಲಿ ಕಾಲ ಕಳೆದಿದ್ದ 27 ಮಂದಿ ಕಾರ್ಮಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.