‘ಅಂಗನವಾಡಿಯ ನಿತ್ಯದ ಕೆಲಸಗಳನ್ನು ಮುಗಿಸಿದ ಬಳಿಕ ಮಾಹಿತಿ ಕಲೆ ಹಾಕುವ ಕೆಲಸಕ್ಕೆ ತೆರಳುವಾಗ ಒಮ್ಮೊಮ್ಮೆ ಕತ್ತಲಾಗುತ್ತದೆ. ಅಷ್ಟಾಗಿಯೂ ನಮ್ಮ ಕೆಲಸಕ್ಕೆ ಯಾವುದೇ ಭತ್ಯೆ, ವೇತನ ಇಲ್ಲವಾಗಿದೆ. ಆರೋಗ್ಯ ಸಮೀಕ್ಷೆ ನಡೆಸುವ ಕೆಲಸಕ್ಕೆ ಆರೋಗ್ಯ ಇಲಾಖೆ ಕೇವಲ ₹500 ನೀಡಲು ಮುಂದಾದಾಗ ಅದನ್ನೇ ನಿರಾಕರಿಸಿದ್ದೇವೆ. ಚುನಾವಣೆಗೆ ಸಂಬಂಧಿಸಿದ ಮಾಹಿತಿ, ಪೋಷಣಾ ಅಭಿಯಾನ ಕಾರ್ಯ ಮುಂತಾದವನ್ನು ಅಂಗನವಾಡಿ ಕಾರ್ಯಕರ್ತರೇ ಕಡ್ಡಾಯವಾಗಿ ಮಾಡಬೇಕಾಗಿದ್ದು, ಕೆಲಸಕ್ಕೆ ಪ್ರತಿಫಲ ಇಲ್ಲವಾಗಿದೆ’ ಎಂದು ಬೇಸರದಿಂದ ಹೇಳಿದರು.