‘ಹಾಲಕ್ಕಿ ಸೇರಿ ಅನೇಕ ತಳ ಸಮುದಾಯದವರ ಬದುಕು ಇಂದು ಹಾಗೇಯೇ ಇದ್ದು ಇದಕ್ಕೆಲ್ಲ ಪರಿಹಾರ ಏನು ಎನ್ನುವುದರ ಬಗ್ಗೆ ಯಾರಲ್ಲೂ ಉತ್ತರವಿಲ್ಲವಾಗಿದೆ. ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ರಾಷ್ಟ್ರೀಯ ಪಕ್ಷಗಳು ಇಂಥ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನನಗೆ ಸಾವಿರಾರು ಜನ ವಿದ್ಯಾರ್ಥಿ ಸ್ನೇಹಿತರು, ಅಧ್ಯಾಪಕ ಗೆಳೆಯರು ಇದ್ದು, ನಾಮಪತ್ರ ಸಲ್ಲಿಸಿ, ಪ್ರಚಾರ ಆರಂಭಿಸಿದಾಗ ಅವರೆಲ್ಲ ಹುರಿದುಂಬಿಸುತ್ತಿದ್ದಾರೆ. ಅಂಥವರ ಮನಸ್ಸಿನಲ್ಲಿ ಸಮಾಜದ ಈ ವ್ಯವಸ್ಥೆಗೆ ಹೊಸ ಪರ್ಯಾಯದ ಬೀಜ ಬಿತ್ತಬೇಕು ಎನ್ನುವುದು ನನ್ನ ಸ್ಪರ್ಧೆಯ ಆಶಯ' ಎಂದು ವಿಶ್ವಾಸ ವ್ಯಕ್ತಪಡಿಸಿದರು.