<p><strong>ಹಳಿಯಾಳ:</strong> ‘ಜಿ+2 ಫಲಾನುಭವಿಗಳು ತಮಗೆ ಮನೆ ಬೇಡವೆಂದು ನಿರಾಕರಿಸಿ ಅರ್ಜಿ ಸಲ್ಲಿಸಿದಾಗ ಆಶ್ರಯ ಸಮಿತಿಯಲ್ಲಿ ಠರಾಯಿಸಿದಂತೆ ಅವರ ವಂತಿಗೆಯನ್ನು ಕೂಡಲೇ ಪಾವತಿಸಿ. ಈ ಬಗ್ಗೆ ಪುರಸಭೆ ಸಿಬ್ಬಂದಿ, ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.</p>.<p>ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಈಚೆಗೆ ನಡೆದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಜಿ +2 ಯೋಜನೆ ಅಡಿಯಲ್ಲಿ ಮನೆ ಬೇಡವೆಂದು ನಿರಾಕರಿಸಿದ 31 ಫಲಾನುಭವಿಗಳ ವಂತಿಕೆ ಹಣವನ್ನು ತಮಗೆ ಮರು ಪಾವತಿಸಬೇಕೆಂದು ಫಲಾನುಭವಿಗಳು ಬೇಡಿಕೆ ಇಟ್ಟಿದ್ದ ಬಗ್ಗೆ ಸಭೆಯಲ್ಲಿ ಪುರಸಭೆ ಅಧಿಕಾರಿಗಳು ತಿಳಿಸಿದಾಗ, ಈ ಬಗ್ಗೆ ವಂತಿಗೆ ಹಣ ಮರು ಪಾವತಿಸುವ ಬಗ್ಗೆ ನಿರ್ಣಯಿಸಿ ನಂತರ ಮಾತನಾಡಿದರು.</p>.<p>‘ಅರ್ಹ ಫಲಾನುಭವಿಗಳಿಗೆ ಮನೆಯನ್ನು ನೀಡಿ, ಹೊರತು ಯಾವುದೇ ರೀತಿಯಿಂದ ಅರ್ಹತೆ ಇಲ್ಲದವರಿಗೆ ಮನೆ ನೀಡಬೇಡಿ. ಸರ್ಕಾರದ ಯೋಜನೆಗಳು ಸದುಪಯೋಗ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯ ಮಾಡಬೇಕು’ ಎಂದರು.</p>.<p>ಆಶ್ರಯ ಸಮಿತಿಯ ಠರಾವುಗಳನ್ನು ಹಾಗೂ ಮತ್ತಿತರ ಖಾಸಗಿ ಒಡೆತನದ ಮಂಜೂರಾತಿಯ ಬಗ್ಗೆ ಚರ್ಚಿಸಲಾಯಿತು.</p>.<p>ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿಯ ಸದಸ್ಯ ಉಮೇಶ ಬೋಳಶೆಟ್ಟಿ, ಇಜಾಜ ಅಹ್ಮದ ಮುಗದ, ರಾಜಶ್ರೀ ಬಾಳೆಕುಂದ್ರಿ, ಅಣ್ಣಪ್ಪಾ ವಡ್ಡರ ಹಾಗೂ ಪುರಸಭೆಯ ಅಧಿಕಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಳಿಯಾಳ:</strong> ‘ಜಿ+2 ಫಲಾನುಭವಿಗಳು ತಮಗೆ ಮನೆ ಬೇಡವೆಂದು ನಿರಾಕರಿಸಿ ಅರ್ಜಿ ಸಲ್ಲಿಸಿದಾಗ ಆಶ್ರಯ ಸಮಿತಿಯಲ್ಲಿ ಠರಾಯಿಸಿದಂತೆ ಅವರ ವಂತಿಗೆಯನ್ನು ಕೂಡಲೇ ಪಾವತಿಸಿ. ಈ ಬಗ್ಗೆ ಪುರಸಭೆ ಸಿಬ್ಬಂದಿ, ಸದಸ್ಯರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ, ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.</p>.<p>ಇಲ್ಲಿನ ಪುರಸಭೆ ಸಭಾ ಭವನದಲ್ಲಿ ಈಚೆಗೆ ನಡೆದ ಆಶ್ರಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.</p>.<p>ಜಿ +2 ಯೋಜನೆ ಅಡಿಯಲ್ಲಿ ಮನೆ ಬೇಡವೆಂದು ನಿರಾಕರಿಸಿದ 31 ಫಲಾನುಭವಿಗಳ ವಂತಿಕೆ ಹಣವನ್ನು ತಮಗೆ ಮರು ಪಾವತಿಸಬೇಕೆಂದು ಫಲಾನುಭವಿಗಳು ಬೇಡಿಕೆ ಇಟ್ಟಿದ್ದ ಬಗ್ಗೆ ಸಭೆಯಲ್ಲಿ ಪುರಸಭೆ ಅಧಿಕಾರಿಗಳು ತಿಳಿಸಿದಾಗ, ಈ ಬಗ್ಗೆ ವಂತಿಗೆ ಹಣ ಮರು ಪಾವತಿಸುವ ಬಗ್ಗೆ ನಿರ್ಣಯಿಸಿ ನಂತರ ಮಾತನಾಡಿದರು.</p>.<p>‘ಅರ್ಹ ಫಲಾನುಭವಿಗಳಿಗೆ ಮನೆಯನ್ನು ನೀಡಿ, ಹೊರತು ಯಾವುದೇ ರೀತಿಯಿಂದ ಅರ್ಹತೆ ಇಲ್ಲದವರಿಗೆ ಮನೆ ನೀಡಬೇಡಿ. ಸರ್ಕಾರದ ಯೋಜನೆಗಳು ಸದುಪಯೋಗ ಆಗಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕಾರ್ಯ ಮಾಡಬೇಕು’ ಎಂದರು.</p>.<p>ಆಶ್ರಯ ಸಮಿತಿಯ ಠರಾವುಗಳನ್ನು ಹಾಗೂ ಮತ್ತಿತರ ಖಾಸಗಿ ಒಡೆತನದ ಮಂಜೂರಾತಿಯ ಬಗ್ಗೆ ಚರ್ಚಿಸಲಾಯಿತು.</p>.<p>ಪುರಸಭೆ ಅಧ್ಯಕ್ಷೆ ದ್ರೌಪದಿ ಅಗಸರ, ಆಶ್ರಯ ಸಮಿತಿಯ ಸದಸ್ಯ ಉಮೇಶ ಬೋಳಶೆಟ್ಟಿ, ಇಜಾಜ ಅಹ್ಮದ ಮುಗದ, ರಾಜಶ್ರೀ ಬಾಳೆಕುಂದ್ರಿ, ಅಣ್ಣಪ್ಪಾ ವಡ್ಡರ ಹಾಗೂ ಪುರಸಭೆಯ ಅಧಿಕಾರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>