ಯುದ್ಧ ವಿಮಾನ ವಾಹಕ ನೌಕೆ ‘ಐ.ಎನ್.ಎಸ್ ವಿಕ್ರಮಾದಿತ್ಯ’ದ 75 ಸಿಬ್ಬಂದಿ, ದೃಷ್ಟಿ ಮತ್ತು ಶ್ರವಣ ದೋಷ ಇರುವ ಮಕ್ಕಳ ‘ಆಶಾ ನಿಕೇತನ’ ಶಾಲೆಗೆ ಭೇಟಿ ನೀಡಿ ಶ್ರಮದಾನದ ಮೂಲಕ ಬಣ್ಣ ಬಳಿದು ಸುಂದರಗೊಳಿಸಿದರು. ಅನಾಥಾಶ್ರಮಗಳಲ್ಲಿ, ಕಡಲತೀರದಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ, 75 ಸಿಬ್ಬಂದಿಯಿಂದ ರಕ್ತದಾನವನ್ನೂ ಹಮ್ಮಿಕೊಳ್ಳಲಾಯಿತು.