ವೆನೆಜುವೆಲಾದ ಏಂಜಲ್ ಜಲಪಾತವನ್ನು ಹತ್ತುವ ಕನಸಿನಲ್ಲಿರುವ ಜ್ಯೋತಿರಾಜ್ ಅವರಿಗೆ ಅಧಿಕ ದೇಹಭಾರ ಸಮಸ್ಯೆಯಾಗಿ ಕಾಡುತ್ತಿದೆ. ಎರಡು ವರ್ಷಗಳ ಹಿಂದೆ ಜೋಗದಲ್ಲಿ ಜೀವರಕ್ಷಕ ಕಾರ್ಯಾಚರಣೆಯಲ್ಲಿರುವ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅವರು, ದೀರ್ಘಕಾಲಿಕ ವಿಶ್ರಾಂತಿ ಪಡೆದ ಪರಿಣಾಮ ಅವರ ದೇಹದ ತೂಕ ಹೆಚ್ಚಾಗಿತ್ತು. ನಿತ್ಯ ಓಡುವ ಮೂಲಕ ತೂಕವನ್ನು 86 ಕೆ.ಜಿ.ಗೆ ಇಳಿಸಿಕೊಂಡಿದ್ದರು. ನಂತರ ಯಾರಿಂದಲೋ ಮಾಹಿತಿ ಪಡೆದು, ಇಲ್ಲಿನ ಡಾ.ವೆಂಕಟರಮಣ ಹೆಗಡೆ ಅವರ ನಿಸರ್ಗಮನೆಗೆ ದಾಖಲಾಗಿದ್ದಾರೆ.