<p><strong>ಕಾರವಾರ</strong>: ಕೋವಿಡ್ ನಿಯಂತ್ರಣಕ್ಕೆ ಜಾರಿಯಾಗಿರುವ ಕರ್ಫ್ಯೂ ನೆಪದಲ್ಲಿ ನಗರಸಭೆ ಸಿಬ್ಬಂದಿ ಶುಕ್ರವಾರ ದರ್ಪ ಎಸಗಿದ್ದಾರೆ. ಬುಟ್ಟಿಯಲ್ಲಿದ್ದ ಮೀನನ್ನು ನೆಲಕ್ಕೆ ಚೆಲ್ಲಿ ಕೋಲು ಹಿಡಿದು ಬೆದರಿಸಿದ್ದಾರೆ ಎಂದು ಮೀನುಗಾರ ಮಹಿಳೆಯರು ದೂರಿದ್ದಾರೆ.</p>.<p>ನಗರದ ಆಯುಷ್ ಆಸ್ಪತ್ರೆ ಬಳಿ ಪಾದಚಾರಿ ರಸ್ತೆಯ ಮೇಲೆ ಕುಳಿತು ಕೆಲವು ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಪರಿಷ್ಕೃತ ಆದೇಶದಂತೆ ಜಿಲ್ಲೆಯಲ್ಲಿ ಬೆಳಿಗ್ಗೆ 10ರಿಂದ ಕರ್ಫ್ಯೂ ಜಾರಿಯಾಗಿದೆ. ಆ ಸಮಯದಲ್ಲಿ ಮೀನು ಮಾರಾಟಗಾರರು ತಮ್ಮ ಮನೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ನಗರಸಭೆ ಸಿಬ್ಬಂದಿ ಬುಟ್ಟಿಯಲ್ಲಿ ಉಳಿದಿದ್ದ ಮೀನನ್ನು ನೆಲಕ್ಕೆ ಬಿಸಾಡಿದರು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಮೀನು ಆಹಾರ ಪದಾರ್ಥ. ನಾವು ನಾಲ್ಕೈದು ಸಾವಿರ ರೂಪಾಯಿ ಬಂಡವಾಳ ಹಾಕಿ ಮಾರಾಟ ಮಾಡುತ್ತೇವೆ. ಅದರಿಂದ ಸಿಗುವ ₹ 500 – ₹ 600ಯಲ್ಲಿ ನಮ್ಮ ಇಡೀ ಕುಟುಂಬದ ಖರ್ಚು ಸಾಗುತ್ತದೆ. ಒಂದು ದಿನ ದುಡಿಯದಿದ್ದರೂ ಊಟಕ್ಕೆ ತೊಂದರೆಯಾಗುತ್ತದೆ. ಪೊಲೀಸರು ಕೂಡ ನಮಗೆ ಹೊಡೆದಿಲ್ಲ. ಮೀನುಗಾರರ ಕಷ್ಟವೇನು ಎಂಬುದು ಅವರಿಗೂ ಗೊತ್ತಿದೆ. ನಗರಸಭೆ ಸಿಬ್ಬಂದಿಗೆ ಈ ರೀತಿ ವರ್ತಿಸಲು ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸುತ್ತ ಕಣ್ಣೀರು ಹಾಕಿದರು.</p>.<p>‘ಸಮುದ್ರದಿಂದ ಮೀನು ಹಿಡಿದು ತಂದು ಅದನ್ನು ಮಾರಾಟ ಮಾಡಲು ಕಷ್ಟವೆಷ್ಟಿದೆ ಎಂದು ಗೊತ್ತಿದ್ದವರು ಈ ರೀತಿ ನೆಲಕ್ಕೆ ಎಸೆದು ಹಾಳು ಮಾಡುತ್ತಿರಲಿಲ್ಲ. ಮನೆ ಮನೆಗೆ ಹೋಗಿ ಮಾರಾಟ ಮಾಡಿ ಎಂದು ಹೇಳುತ್ತಾರೆ. ಆದರೆ, ಮನೆಯವರು ಸರಿಯಾಗಿ ಸ್ಪಂದಿಸುವುದಿಲ್ಲ. ಕೊರೊನಾದ ನೆಪದಲ್ಲಿ ಕೆಲವರು ಹತ್ತಿರ ಬರುವುದಿರಲಿ, ಗೇಟು ಕೂಡ ತೆರೆಯುವುದಿಲ್ಲ’ ಎಂದು ಅಳಲು ತೋಡಿಕೊಂಡರು.</p>.<p>‘ಮಹಿಳೆಯರು ರಸ್ತೆ ಬದಿ ಅಂತರ ಕಾಯ್ದುಕೊಂಡು ಕುಳಿತು ಮೀನು ಮಾರಾಟ ಮಾಡುತ್ತಿದ್ದಾರೆ. ಅಗತ್ಯವಿದ್ದವರು ಬಂದು ಖರೀದಿಸುತ್ತಾರೆ. ಒಂದು ವೇಳೆ ನಿಯಮದ ಉಲ್ಲಂಘನೆಯಾಗಿದ್ದರೆ ಎಚ್ಚರಿಕೆ ಕೊಡಲಿ. ಅದು ಬಿಟ್ಟು ಈ ರೀತಿ ದೌರ್ಜನ್ಯ ಮಾಡುವುದು ಖಂಡಿತ ಸರಿಯಲ್ಲ’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಆಕ್ಷೇಪಿಸಿದರು.</p>.<p class="Subhead"><strong>ಗುಂಪು ಚದುರಿಸಿದ ಪೊಲೀಸರು</strong></p>.<p>ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 10ರ ನಂತರವೂ ಹಲವಾರು ಜನ ಸೇರಿದ್ದರು. ಅಲ್ಲಿಗೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು. ಒಂದಿಬ್ಬರಿಗೆ ಲಘುವಾಗಿ ಲಾಠಿಯ ರುಚಿಯನ್ನೂ ತೋರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ</strong>: ಕೋವಿಡ್ ನಿಯಂತ್ರಣಕ್ಕೆ ಜಾರಿಯಾಗಿರುವ ಕರ್ಫ್ಯೂ ನೆಪದಲ್ಲಿ ನಗರಸಭೆ ಸಿಬ್ಬಂದಿ ಶುಕ್ರವಾರ ದರ್ಪ ಎಸಗಿದ್ದಾರೆ. ಬುಟ್ಟಿಯಲ್ಲಿದ್ದ ಮೀನನ್ನು ನೆಲಕ್ಕೆ ಚೆಲ್ಲಿ ಕೋಲು ಹಿಡಿದು ಬೆದರಿಸಿದ್ದಾರೆ ಎಂದು ಮೀನುಗಾರ ಮಹಿಳೆಯರು ದೂರಿದ್ದಾರೆ.</p>.<p>ನಗರದ ಆಯುಷ್ ಆಸ್ಪತ್ರೆ ಬಳಿ ಪಾದಚಾರಿ ರಸ್ತೆಯ ಮೇಲೆ ಕುಳಿತು ಕೆಲವು ಮಹಿಳೆಯರು ಮೀನು ಮಾರಾಟ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಪರಿಷ್ಕೃತ ಆದೇಶದಂತೆ ಜಿಲ್ಲೆಯಲ್ಲಿ ಬೆಳಿಗ್ಗೆ 10ರಿಂದ ಕರ್ಫ್ಯೂ ಜಾರಿಯಾಗಿದೆ. ಆ ಸಮಯದಲ್ಲಿ ಮೀನು ಮಾರಾಟಗಾರರು ತಮ್ಮ ಮನೆಗಳಿಗೆ ತೆರಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಬಂದ ನಗರಸಭೆ ಸಿಬ್ಬಂದಿ ಬುಟ್ಟಿಯಲ್ಲಿ ಉಳಿದಿದ್ದ ಮೀನನ್ನು ನೆಲಕ್ಕೆ ಬಿಸಾಡಿದರು ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಮೀನು ಆಹಾರ ಪದಾರ್ಥ. ನಾವು ನಾಲ್ಕೈದು ಸಾವಿರ ರೂಪಾಯಿ ಬಂಡವಾಳ ಹಾಕಿ ಮಾರಾಟ ಮಾಡುತ್ತೇವೆ. ಅದರಿಂದ ಸಿಗುವ ₹ 500 – ₹ 600ಯಲ್ಲಿ ನಮ್ಮ ಇಡೀ ಕುಟುಂಬದ ಖರ್ಚು ಸಾಗುತ್ತದೆ. ಒಂದು ದಿನ ದುಡಿಯದಿದ್ದರೂ ಊಟಕ್ಕೆ ತೊಂದರೆಯಾಗುತ್ತದೆ. ಪೊಲೀಸರು ಕೂಡ ನಮಗೆ ಹೊಡೆದಿಲ್ಲ. ಮೀನುಗಾರರ ಕಷ್ಟವೇನು ಎಂಬುದು ಅವರಿಗೂ ಗೊತ್ತಿದೆ. ನಗರಸಭೆ ಸಿಬ್ಬಂದಿಗೆ ಈ ರೀತಿ ವರ್ತಿಸಲು ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸುತ್ತ ಕಣ್ಣೀರು ಹಾಕಿದರು.</p>.<p>‘ಸಮುದ್ರದಿಂದ ಮೀನು ಹಿಡಿದು ತಂದು ಅದನ್ನು ಮಾರಾಟ ಮಾಡಲು ಕಷ್ಟವೆಷ್ಟಿದೆ ಎಂದು ಗೊತ್ತಿದ್ದವರು ಈ ರೀತಿ ನೆಲಕ್ಕೆ ಎಸೆದು ಹಾಳು ಮಾಡುತ್ತಿರಲಿಲ್ಲ. ಮನೆ ಮನೆಗೆ ಹೋಗಿ ಮಾರಾಟ ಮಾಡಿ ಎಂದು ಹೇಳುತ್ತಾರೆ. ಆದರೆ, ಮನೆಯವರು ಸರಿಯಾಗಿ ಸ್ಪಂದಿಸುವುದಿಲ್ಲ. ಕೊರೊನಾದ ನೆಪದಲ್ಲಿ ಕೆಲವರು ಹತ್ತಿರ ಬರುವುದಿರಲಿ, ಗೇಟು ಕೂಡ ತೆರೆಯುವುದಿಲ್ಲ’ ಎಂದು ಅಳಲು ತೋಡಿಕೊಂಡರು.</p>.<p>‘ಮಹಿಳೆಯರು ರಸ್ತೆ ಬದಿ ಅಂತರ ಕಾಯ್ದುಕೊಂಡು ಕುಳಿತು ಮೀನು ಮಾರಾಟ ಮಾಡುತ್ತಿದ್ದಾರೆ. ಅಗತ್ಯವಿದ್ದವರು ಬಂದು ಖರೀದಿಸುತ್ತಾರೆ. ಒಂದು ವೇಳೆ ನಿಯಮದ ಉಲ್ಲಂಘನೆಯಾಗಿದ್ದರೆ ಎಚ್ಚರಿಕೆ ಕೊಡಲಿ. ಅದು ಬಿಟ್ಟು ಈ ರೀತಿ ದೌರ್ಜನ್ಯ ಮಾಡುವುದು ಖಂಡಿತ ಸರಿಯಲ್ಲ’ ಎಂದು ಮೀನುಗಾರ ಮುಖಂಡ ವಿನಾಯಕ ಹರಿಕಂತ್ರ ಆಕ್ಷೇಪಿಸಿದರು.</p>.<p class="Subhead"><strong>ಗುಂಪು ಚದುರಿಸಿದ ಪೊಲೀಸರು</strong></p>.<p>ನಗರದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಿಗ್ಗೆ 10ರ ನಂತರವೂ ಹಲವಾರು ಜನ ಸೇರಿದ್ದರು. ಅಲ್ಲಿಗೆ ಬಂದ ಪೊಲೀಸರು ಗುಂಪನ್ನು ಚದುರಿಸಿದರು. ಒಂದಿಬ್ಬರಿಗೆ ಲಘುವಾಗಿ ಲಾಠಿಯ ರುಚಿಯನ್ನೂ ತೋರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>