ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಕಾರವಾರ | ವೈದ್ಯರ ಕೊರತೆ: ಪಶು ಚಿಕಿತ್ಸಾಲಯದ ಬಾಗಿಲಿಗೆ ‘ಬೀಗ’

ಆರೋಗ್ಯ ಸೇವೆ ವ್ಯತ್ಯಯದಿಂದ ಹೈನುಗಾರಿಕೆ ಕುಂಠಿತ
Published : 26 ಆಗಸ್ಟ್ 2024, 6:16 IST
Last Updated : 26 ಆಗಸ್ಟ್ 2024, 6:16 IST
ಫಾಲೋ ಮಾಡಿ
Comments
ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದ ಪಶು ಆಸ್ಪತ್ರೆಯು ಬಾಗಿಲು ಮುಚ್ಚಿಕೊಂಡಿರುವುದು.
ಮುಂಡಗೋಡ ತಾಲ್ಲೂಕಿನ ಚಿಗಳ್ಳಿ ಗ್ರಾಮದ ಪಶು ಆಸ್ಪತ್ರೆಯು ಬಾಗಿಲು ಮುಚ್ಚಿಕೊಂಡಿರುವುದು.
ಇಲಾಖೆಯಲ್ಲಿ ಕಾಯಂ ವೈದ್ಯರ ಕೊರತೆ ಇರುವ ಹಿನ್ನೆಲೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲವು ವೈದ್ಯರ ನೇಮಕಾತಿ ಮಾಡಲಾಗಿದೆ. ಬಹುತೇಕ ವೈದ್ಯರು ಇನ್ನಷ್ಟೆ ಕರ್ತವ್ಯಕ್ಕೆ ಹಾಜರಾಗಬೇಕಿದೆ.
ಡಾ.ಮೋಹನ ಕುಮಾರ್ ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ
ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಿಸಿದರೆ ಗ್ರಾಮೀಣ ಭಾಗದಲ್ಲಿ ಹೈನುಗಾರರು ಜಾನುವಾರು ಸಾಕಣೆಗೆ ಆಸಕ್ತಿ ತೋರಿಸುತ್ತಾರೆ.
ಮಹಾಲೇಶ್ವರ ಜಿವೋಜಿ ಬಸವಳ್ಳಿ (ಹಳಿಯಾಳ)‌ ರೈತ
ವೈದ್ಯರು ಇಲ್ಲದಿರುವ ಸಮಯದಲ್ಲಿ ಆಸ್ಪತ್ರೆಯ ಸಹಾಯಕರು ದೂರವಾಣಿ ಮೂಲಕ ವೈದ್ಯರನ್ನು ಸಂಪರ್ಕಿಸಿ ಔಷಧ ನೀಡುತ್ತಾರೆ. ಕಿರವತ್ತಿಯಲ್ಲಿ ಪಶುಚಿಕಿತ್ಸಾಲಯಕ್ಕೆ ಕಾಯಂ ವೈದ್ಯರನ್ನು ನೇಮಿಸಬೇಕು.
ರಾಮು ಮಲಗೊಂಡೆ ಅಲ್ಕೇರಿ ಗೌಳಿವಾಡಾ (ಯಲ್ಲಾಪುರ) ಹೈನುಗಾರ
ಹಳ್ಳಿಯಲ್ಲಿ ಪಶು ಚಿಕಿತ್ಸಾಲಯ ಇದ್ದರೂ ವೈದ್ಯರಿಲ್ಲದ ಕಾರಣಕ್ಕೆ ಜಾನುವಾರುಗಳಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುತ್ತಿವೆ.
ಗೋವಿಂದ ಗೌಡ ಅಗಸೂರ (ಅಂಕೋಲಾ) ಹೈನುಗಾರ
ನೂರಾರು ಕಿ.ಮೀ ಬೈಕ್‍ನಲ್ಲೇ ಸುತ್ತಬೇಕು!
ಜೊಯಿಡಾ ತಾಲ್ಲೂಕಿನಲ್ಲಿ ಒಟ್ಟು 9 ಪಶು ವೈದ್ಯಾಧಿಕಾರಿ ಹುದ್ದೆ ಮಂಜೂರಾತಿ ಇದ್ದು ತಾಲ್ಲೂಕು ವೈದ್ಯಾಧಿಕಾರಿ ಸೇರಿದಂತೆ ಇಬ್ಬರು ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಕುಂಬಾರವಾಡ ಉಳವಿ ಗುಂದ ರಾಮನಗರ ಜಗಲಪೇಟ ಆಖೇತಿಯಲ್ಲಿನ ಆರು ಆಸ್ಪತ್ರೆಗಳ ಪೈಕಿ ಒಬ್ಬರೇ ವೈದ್ಯರಿದ್ದಾರೆ. ‘ಸೂಕ್ತ ವಾಹನ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿದಿನವೂ ಸುಮಾರು 150 ರಿಂದ 200 ಕಿ.ಮೀ ದ್ವಿಚಕ್ರ ವಾಹನದಲ್ಲಿ ಹಳ್ಳಿಗಳಿಗೆ ಜಾನುವಾರುಗಳಿಗೆ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲು ಓಡಾಡುವ ಸ್ಥಿತಿ ಬಂದಿದೆ’ ಎನ್ನುತ್ತಾರೆ ಪಶು ವೈದ್ಯಾಧಿಕಾರಿ ಒಬ್ಬರು. ‘ಸಿಬ್ಬಂದಿ ಕೊರತೆಯಿಂದ ಸಕಾಲದಲ್ಲಿ ಆರೋಗ್ಯ ಸೇವೆ ನೀಡಲು ಸಮಸ್ಯೆಯಾಗುತ್ತಿದೆ’ ಎನ್ನುತ್ತಾರೆ ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಮಂಜಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT