ಶನಿವಾರ ರಾತ್ರಿ 1 ಗಂಟೆಯಿಂದ ಚಂದ್ರಗ್ರಹಣ ಮುಗಿಯುವ ರಾತ್ರಿ 2.30ರ ವರೆಗೆ ದೇವಸ್ಥಾನ ತೆಗೆದಿರಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿದೆ. ಆದರೆ ಶನಿವಾರ ಸಂಜೆ 4 ರಿಂದ 5.30 ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಶವಿರಲಿದ್ದು, 5.30 ರ ನಂತರ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತದೆ. ಅದೇ ದಿನ ರಾತ್ರಿ ಭಕ್ತರಿಗೆ ಅಮೃತಾನ್ನ ಪ್ರಸಾದ ಭೋಜನ ಇರುವುದಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.