ಪಕ್ಷಭೇದ ಮರೆತು ಕ್ಷೇತ್ರದ ಕಟ್ಟಕಡೆಯ ವ್ಯಕ್ತಿಗೆ ಸಹಾಯ ಮಾಡುವುದರ ಜೊತೆಗೆ ಮಂದಿರ, ಮಠ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದಾಗಿ ಹೇಳಿದ್ದಾರೆ. ಕ್ಷೇತ್ರದಲ್ಲಿ ತಾನು ಲಭ್ಯ ಇರದ ಸಮಯದಲ್ಲಿ ಜನರು ತನ್ನ ಮಡದಿ ಪುಷ್ಪಲತಾ ಹಾಗೂ ಮಗಳು ಬೀನಾ ವೈದ್ಯ ಅವರಲ್ಲಿ ಕಷ್ಟ ನಿವೇದಿಸಿಕೊಂಡರೆ ಅದಕ್ಕೆ ತಾನು ಸ್ಪಂದಿಸುವುದಾಗಿ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ರಸ್ತೆ, ಕುಡಿಯುವ ನೀರು ಹಾಗು ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಯೋಜನೆ ರೂಪಿಸಿರುವ ಅವರು ಭಟ್ಕಳದ ಚಿತ್ರಣವನ್ನು ಇನ್ನೊಮ್ಮೆ ಬದಲಾಯಿಸಲು ಸಂಕಲ್ಪ ತೊಟ್ಟಿದ್ದಾರೆ.