ಭಟ್ಕಳ: ಜಾನುವಾರು ವಧೆ ಮಾಡಿ ಅದರ ಮಾಂಸವನ್ನು ಕಾರಿನಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಗ್ರಾಮೀಣ ಠಾಣೆ ಪೊಲೀಸರು ಶಿರಾಲಿ ಚೆಕ್ ಪೊಸ್ ಬಳಿ ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ.
ಜಾಲಿ ಪಟ್ಟಣದ ಬೆಂಡೆಕಾನ ನಿವಾಸಿ ಸೈಯದ್ ಮೋಹಿದ್ದೀನ್ ಬಂಧಿತ ಆರೋಪಿ. ಜಾಲಿ ಆಜಾದ ನಗರ ನಿವಾಸಿ ಗಜಬರ್ ಸಮೀರ್, ಹೆಬಳೆ ಹನಿಫಾಬಾದ್ ನಿವಾಸಿ ಇಬ್ರಾಹಿಂ ಮುಹಮ್ಮದ ಹುಸೇನ್ ಹಾಗೂ ಜಾಲಿ ತಗ್ಗರಗೋಡ ನಿವಾಸಿ ನಾಸೀರ್ ಪರಾರಿಯಾದ ಆರೋಪಿಗಳಾಗಿದ್ದಾರೆ.
ಆರೋಪಿತರು ಟೊಯೋಟಾ ಇಟೋಯಿನ್ ಕಾರಿನಲ್ಲಿ 80 ಸಾವಿರ ರೂಪಾಯಿ ಮೌಲ್ಯದ ಅಂದಾಜು 400 ಕೆ.ಜಿ ಜಾನುವಾರು ಮಾಂಸವನ್ನು ಸಾಗಾಟ ಮಾಡುವಾಗ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.