‘ಹೆಂಡ ಗಿಂಡ ಕುಡಿದಿದ್ರಾ?’:ಪ್ರಗತಿ ಪರಿಶೀಲನೆಯ ವೇಳೆ, ಅಧಿಕಾರಿಗಳು ಮೊದಲೇ ನೀಡಿದ ಮಾಹಿತಿಗೂ ಸಭೆಯಲ್ಲಿ ಹೇಳುತ್ತಿರುವುದಕ್ಕೂ ಬಹಳ ವ್ಯತ್ಯಾಸ ಕಂಡುಬಂತು. ಇದರಿಂದ ಸಿಟ್ಟಾದ ಸಚಿವ ಮಾಧುಸ್ವಾಮಿ, ‘ಅಂಕಿ ಅಂಶ ಭರ್ತಿ ಮಾಡಿದವರು ಯಾರ್ರೀ? ಹೆಂಡ ಗಿಂಡ ಕುಡಿದಿದ್ರಾ? ₹ 50 ಲಕ್ಷದ ಕಾಮಗಾರಿಗೆ ₹ 500 ಲಕ್ಷ (₹ 5 ಕೋಟಿ) ಎಂದು ನಮೂದಿಸ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು.