ಪ್ರಧಾನಿ ಮೋದಿಯವರು ಯಾವುದೇ ಸೌಲಭ್ಯ ಘೋಷಿಸುವಾಗ ದೇಶದ 140 ಕೋಟಿ ಜನತೆಯನ್ನು ಉದ್ದೇಶಿಸಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಜಾತಿ, ಜನಾಂಗ, ಪಕ್ಷ, ಪಂಗಡಗಳನ್ನು ನೋಡಿಲ್ಲ, ಎಂದೂ ಬೇಧ, ಭಾವ ಮಾಡುವುದಿಲ್ಲ. ದೇಶದಲ್ಲಿ ಬಡವರಿಗಾಗಿ ನೀಡುವ ಅಕ್ಕಿ, ಉಜ್ವಲ್ ಗ್ಯಾಸ್ ಯೋಜನೆ, ಬೇಟಿ ಬಚಾವ್, ಬೇಟಿ ಪಡಾವ್ ಯೋಜನೆ, ಕೊರೊನಾ ಸಮಯದಲ್ಲಿ ವ್ಯಾಕ್ಸಿನ್, ಜನಧನ್, ಕೃಷಿ ಸಮ್ಮಾನ್, ನೀರಿನ ಯೋಜನೆ, ಶೌಚಾಲಯ ಯೋಜನೆ, ವಿಮಾ, 5 ಲಕ್ಷದ ಉಚಿತ ಚಿಕಿತ್ಸಾ ಯೋಜನೆ ಎಲ್ಲವನ್ನೂ ಸಮಾನವಾಗಿ ನೀಡಿದ್ದಾರೆ. ಆದರೂ ಮೋದಿ ಅವರನ್ನು ವಿರೋಧಿಸುವ ಅಲ್ಪ ಸಂಖ್ಯಾತರು ಉತ್ತರಿಸಬೇಕಾಗಿದೆ ಎಂದು ಹೇಳಿದರು.