<p><strong>ಶಿರಸಿ:</strong> ‘ತ್ರಾಣವಿದ್ದರೆ ಯಾಣ’ ಎಂಬ ಮಾತು ಹಳೆಯದು. ಈಗ ತ್ರಾಣವಿದ್ದರೂ ಯಾಣಕ್ಕೆ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಯಾಣಕ್ಕೆ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರವಾಸಿಗರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.</p>.<p>ಕುಮಟಾ ಹಾಗೂ ಶಿರಸಿ ಎರಡು ಮಾರ್ಗಗಳಿಂದ ಯಾಣಕ್ಕೆ ತಲುಪಬಹುದು. ಉತ್ತರ ಕರ್ನಾಟಕ ಭಾಗಗಳಿಂದ ಬರುವವರು ಶಿರಸಿ–ದೇವನಳ್ಳಿ–ವಡ್ಡಿ–ಗೋಕರ್ಣ (ರಾಜ್ಯ ಹೆದ್ದಾರಿ 143) ರಸ್ತೆಯಲ್ಲಿ ಸಾಗಿ, ಯಾಣಕ್ಕೆ ತಲುಪುತ್ತಾರೆ. ಈ ಹೆದ್ದಾರಿಯಲ್ಲಿ ಶಿರಸಿಯಿಂದ 40 ಕಿ.ಮೀ ಸಾಗಿದರೆ, ಅಡ್ಡ ತಿರುವಿನಲ್ಲಿ ಮೂರು ಕಿ.ಮೀ ರಸ್ತೆಯಿದೆ. ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಲೂ ಪ್ರಯಾಸ ಪಡಬೇಕಾದ ಸ್ಥಿತಿಯಿದೆ.</p>.<p>‘ಕರಾವಳಿ ಭಾಗದಿಂದ ಕೆಲವು ಪ್ರವಾಸಿಗರು ಬಂದರೆ, ಇನ್ನು ಕೆಲವರು ಶಿರಸಿ ಮಾರ್ಗವಾಗಿ ಬರುತ್ತಾರೆ. ಎರಡೂ ಕಡೆಯಿಂದ ಬರುವವರು ಒಳಗಿನ ಮೂರು ಕಿ.ಮೀ ರಸ್ತೆಯಲ್ಲಿ ಸಾಗಿಯೇ ಯಾಣ ತಲುಪಬೇಕು. ಆದರೆ, ಈ ರಸ್ತೆಯ ಸ್ಥಿತಿ ನೋಡಿದರೆ, ನಮಗೆ ಸ್ಥಳೀಯರಿಗೇ ನಾಚಿಕೆಯಾಗುತ್ತದೆ. ನಿತ್ಯ ನೂರಾರು ಪ್ರವಾಸಿಗರು ಬರುವ ರಸ್ತೆ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ’ ಎನ್ನುತ್ತಾರೆ ವಿ.ಆರ್.ಹೆಗಡೆ ಮತ್ತಿಘಟ್ಟ.</p>.<p>‘ವಾರದ ಹಿಂದೆ ಈ ರಸ್ತೆಯಲ್ಲಿ ಬಂದಿದ್ದ ಕಾರೊಂದು ಹೊಂಡದಲ್ಲಿ ಸಿಕ್ಕಿಕೊಂಡಿತ್ತು. ನಂತರ ಜೆಸಿಬಿ ತಂದು ಕಾರನ್ನು ಮೇಲೆತ್ತಲಾಯಿತು. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಗುಂಡಿ ದಾಟಿಸಲು ಹೋಗಿದ್ದ ಪ್ರವಾಸಿಗರೊಬ್ಬರ ಕಾರಿನ ಚೇಂಬರ್ ಒಡೆದಿದೆ. ವಾಹನದಲ್ಲಿ ಕುಳಿತುಕೊಂಡು ಪ್ರಯಾಣಿಸಲು ಸಾಧ್ಯವಾಗದೇ, ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಹೋಗಿ, ನಂತರ ಹೃದಯಾಘಾತಕ್ಕೆ ಒಳಗಾದರು. ಇಷ್ಟಾದರೂ, ಈ ತಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಿಲ್ಲ’ ಎಂದು ಅವರು ಆರೋಪಿಸಿದರು.</p>.<p>‘ವಡ್ಡಿ ಘಟ್ಟದಲ್ಲಿ 40 ಕಿ.ಮೀ.ಯಿಂದ 46 ಕಿ.ಮೀ ತನಕ ಕೂಡ ರಸ್ತೆ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿರುವ ಶಿರಸಿ–ಕುಮಟಾ ರಸ್ತೆಯ ವಿಸ್ತರಣೆ ಕಾರಣಕ್ಕೆ ಸಂಚಾರ ಬಂದ್ ಆದರೆ ಕರಾವಳಿ ಹೋಗುವವರು ಇದೇ ಮಾರ್ಗದಲ್ಲಿ ಹೋಗಬೇಕು. ಜಿಲ್ಲಾಡಳಿತ ವಿಶೇಷ ಲಕ್ಷ್ಯವಹಿಸಿ ಈ ರಸ್ತೆ ದುರಸ್ತಿಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎನ್.ವಿ.ವೈದ್ಯ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ‘ತ್ರಾಣವಿದ್ದರೆ ಯಾಣ’ ಎಂಬ ಮಾತು ಹಳೆಯದು. ಈಗ ತ್ರಾಣವಿದ್ದರೂ ಯಾಣಕ್ಕೆ ತಲುಪುವುದು ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವ ಯಾಣಕ್ಕೆ ಸಾಗುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಪ್ರವಾಸಿಗರು ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.</p>.<p>ಕುಮಟಾ ಹಾಗೂ ಶಿರಸಿ ಎರಡು ಮಾರ್ಗಗಳಿಂದ ಯಾಣಕ್ಕೆ ತಲುಪಬಹುದು. ಉತ್ತರ ಕರ್ನಾಟಕ ಭಾಗಗಳಿಂದ ಬರುವವರು ಶಿರಸಿ–ದೇವನಳ್ಳಿ–ವಡ್ಡಿ–ಗೋಕರ್ಣ (ರಾಜ್ಯ ಹೆದ್ದಾರಿ 143) ರಸ್ತೆಯಲ್ಲಿ ಸಾಗಿ, ಯಾಣಕ್ಕೆ ತಲುಪುತ್ತಾರೆ. ಈ ಹೆದ್ದಾರಿಯಲ್ಲಿ ಶಿರಸಿಯಿಂದ 40 ಕಿ.ಮೀ ಸಾಗಿದರೆ, ಅಡ್ಡ ತಿರುವಿನಲ್ಲಿ ಮೂರು ಕಿ.ಮೀ ರಸ್ತೆಯಿದೆ. ಈ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ಸಾಗಲೂ ಪ್ರಯಾಸ ಪಡಬೇಕಾದ ಸ್ಥಿತಿಯಿದೆ.</p>.<p>‘ಕರಾವಳಿ ಭಾಗದಿಂದ ಕೆಲವು ಪ್ರವಾಸಿಗರು ಬಂದರೆ, ಇನ್ನು ಕೆಲವರು ಶಿರಸಿ ಮಾರ್ಗವಾಗಿ ಬರುತ್ತಾರೆ. ಎರಡೂ ಕಡೆಯಿಂದ ಬರುವವರು ಒಳಗಿನ ಮೂರು ಕಿ.ಮೀ ರಸ್ತೆಯಲ್ಲಿ ಸಾಗಿಯೇ ಯಾಣ ತಲುಪಬೇಕು. ಆದರೆ, ಈ ರಸ್ತೆಯ ಸ್ಥಿತಿ ನೋಡಿದರೆ, ನಮಗೆ ಸ್ಥಳೀಯರಿಗೇ ನಾಚಿಕೆಯಾಗುತ್ತದೆ. ನಿತ್ಯ ನೂರಾರು ಪ್ರವಾಸಿಗರು ಬರುವ ರಸ್ತೆ ಸಹ ನಿರ್ಲಕ್ಷ್ಯಕ್ಕೊಳಗಾಗಿದೆ’ ಎನ್ನುತ್ತಾರೆ ವಿ.ಆರ್.ಹೆಗಡೆ ಮತ್ತಿಘಟ್ಟ.</p>.<p>‘ವಾರದ ಹಿಂದೆ ಈ ರಸ್ತೆಯಲ್ಲಿ ಬಂದಿದ್ದ ಕಾರೊಂದು ಹೊಂಡದಲ್ಲಿ ಸಿಕ್ಕಿಕೊಂಡಿತ್ತು. ನಂತರ ಜೆಸಿಬಿ ತಂದು ಕಾರನ್ನು ಮೇಲೆತ್ತಲಾಯಿತು. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ. ಗುಂಡಿ ದಾಟಿಸಲು ಹೋಗಿದ್ದ ಪ್ರವಾಸಿಗರೊಬ್ಬರ ಕಾರಿನ ಚೇಂಬರ್ ಒಡೆದಿದೆ. ವಾಹನದಲ್ಲಿ ಕುಳಿತುಕೊಂಡು ಪ್ರಯಾಣಿಸಲು ಸಾಧ್ಯವಾಗದೇ, ಮಹಿಳೆಯೊಬ್ಬರು ಕಾಲ್ನಡಿಗೆಯಲ್ಲಿ ಹೋಗಿ, ನಂತರ ಹೃದಯಾಘಾತಕ್ಕೆ ಒಳಗಾದರು. ಇಷ್ಟಾದರೂ, ಈ ತಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಗಮನಹರಿಸಿಲ್ಲ’ ಎಂದು ಅವರು ಆರೋಪಿಸಿದರು.</p>.<p>‘ವಡ್ಡಿ ಘಟ್ಟದಲ್ಲಿ 40 ಕಿ.ಮೀ.ಯಿಂದ 46 ಕಿ.ಮೀ ತನಕ ಕೂಡ ರಸ್ತೆ ಹಾಳಾಗಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾಗಿರುವ ಶಿರಸಿ–ಕುಮಟಾ ರಸ್ತೆಯ ವಿಸ್ತರಣೆ ಕಾರಣಕ್ಕೆ ಸಂಚಾರ ಬಂದ್ ಆದರೆ ಕರಾವಳಿ ಹೋಗುವವರು ಇದೇ ಮಾರ್ಗದಲ್ಲಿ ಹೋಗಬೇಕು. ಜಿಲ್ಲಾಡಳಿತ ವಿಶೇಷ ಲಕ್ಷ್ಯವಹಿಸಿ ಈ ರಸ್ತೆ ದುರಸ್ತಿಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ಎನ್.ವಿ.ವೈದ್ಯ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>