<p><strong>ಶಿರಸಿ:</strong> ಕರ್ನಾಟಕ ರಾಜ್ಯ ಅಂಚೆ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ನಡೆದ ಅಂಚೆಚೀಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿರಸಿ ಅಂಚೆ ವಿಭಾಗದಿಂದ 22 ಮಕ್ಕಳು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ಮಟ್ಟದಲ್ಲಿ ಶಿರಸಿ ಅಂಚೆ ವಿಭಾಗ ಪ್ರಥಮ ಸ್ಥಾನ ಪಡೆದಿದೆ. ಸತತ ಮೂರನೇ ಬಾರಿಗೆ ಈ ವಿಭಾಗ ಉತ್ತಮ ಸಾಧನೆ ಮಾಡಿದೆ.</p>.<p>ಆಯ್ಕೆಯಾಗಿರುವ ಪ್ರತಿ ವಿದ್ಯಾರ್ಥಿಗೆ ₹ 6000 ವಿದ್ಯಾರ್ಥಿವೇತನ ದೊರೆಯಲಿದೆ. ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಮಾಜಿ ಸೈನಿಕರೂ ಆಗಿರುವ ಅಂಚೆ ಇಲಾಖೆ ಅಧಿಕಾರಿ (ಪ್ರಸ್ತುತ ನಿವೃತ್ತಿ ಹೊಂದಿರುವ) ರಾಮು ಇ, ಅಂಚೆಚೀಟಿ ಸಂಗ್ರಹಕಾರರಾದ ವಿ.ಎಸ್.ಹೆಗಡೆ, ನರಸಿಂಹಮೂರ್ತಿ ವಿಶೇಷ ತರಬೇತಿ ನೀಡಿದ್ದರು. ‘2017ರಿಂದ 2020ರವರೆಗೆ ಸತತವಾಗಿ ಅತಿಹೆಚ್ಚು ವಿದ್ಯಾರ್ಥಿಗಳು ವಿಭಾಗದಿಂದ ಆಯ್ಕೆಯಾಗಿದ್ದಾರೆ’ ಎಂದು ರಾಮು ತಿಳಿಸಿದ್ದಾರೆ.</p>.<p>ತಾಲ್ಲೂಕಿನ ಇಸಳೂರು ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳಾದ ಅವ್ಯಕ್ತ ಹೆಗಡೆ, ಅಖಿಲ್ ಕಂಚುಗಾರ, ಸುಘೋಷ್ ಜೋಶಿ, ನವ್ಯಶ್ರೇಯಾ ಪಿ.ಆರ್, ಧ್ರುವ ಹೆಗಡೆ, ಪುನೀತ್ ಆರ್, ಅಕ್ಷಯ ಭಟ್ಟ, ತನ್ಮಯ ವನಿಷ್ಠ, ಸುಜಯ್ ಭಟ್ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಕರ್ನಾಟಕ ರಾಜ್ಯ ಅಂಚೆ ಇಲಾಖೆ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯ ಮಟ್ಟದ ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ನಡೆದ ಅಂಚೆಚೀಟಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿರಸಿ ಅಂಚೆ ವಿಭಾಗದಿಂದ 22 ಮಕ್ಕಳು ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ್ಯ ಮಟ್ಟದಲ್ಲಿ ಶಿರಸಿ ಅಂಚೆ ವಿಭಾಗ ಪ್ರಥಮ ಸ್ಥಾನ ಪಡೆದಿದೆ. ಸತತ ಮೂರನೇ ಬಾರಿಗೆ ಈ ವಿಭಾಗ ಉತ್ತಮ ಸಾಧನೆ ಮಾಡಿದೆ.</p>.<p>ಆಯ್ಕೆಯಾಗಿರುವ ಪ್ರತಿ ವಿದ್ಯಾರ್ಥಿಗೆ ₹ 6000 ವಿದ್ಯಾರ್ಥಿವೇತನ ದೊರೆಯಲಿದೆ. ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಮಾಜಿ ಸೈನಿಕರೂ ಆಗಿರುವ ಅಂಚೆ ಇಲಾಖೆ ಅಧಿಕಾರಿ (ಪ್ರಸ್ತುತ ನಿವೃತ್ತಿ ಹೊಂದಿರುವ) ರಾಮು ಇ, ಅಂಚೆಚೀಟಿ ಸಂಗ್ರಹಕಾರರಾದ ವಿ.ಎಸ್.ಹೆಗಡೆ, ನರಸಿಂಹಮೂರ್ತಿ ವಿಶೇಷ ತರಬೇತಿ ನೀಡಿದ್ದರು. ‘2017ರಿಂದ 2020ರವರೆಗೆ ಸತತವಾಗಿ ಅತಿಹೆಚ್ಚು ವಿದ್ಯಾರ್ಥಿಗಳು ವಿಭಾಗದಿಂದ ಆಯ್ಕೆಯಾಗಿದ್ದಾರೆ’ ಎಂದು ರಾಮು ತಿಳಿಸಿದ್ದಾರೆ.</p>.<p>ತಾಲ್ಲೂಕಿನ ಇಸಳೂರು ಶ್ರೀನಿಕೇತನ ಶಾಲೆಯ ವಿದ್ಯಾರ್ಥಿಗಳಾದ ಅವ್ಯಕ್ತ ಹೆಗಡೆ, ಅಖಿಲ್ ಕಂಚುಗಾರ, ಸುಘೋಷ್ ಜೋಶಿ, ನವ್ಯಶ್ರೇಯಾ ಪಿ.ಆರ್, ಧ್ರುವ ಹೆಗಡೆ, ಪುನೀತ್ ಆರ್, ಅಕ್ಷಯ ಭಟ್ಟ, ತನ್ಮಯ ವನಿಷ್ಠ, ಸುಜಯ್ ಭಟ್ ಈ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>