ಪ್ರತಿ ವರ್ಷ ಸ್ಮಶಾನ ಅಭಿವೃದ್ಧಿಗೆ ಹಣ ಮೀಸಲಿಡಲಾಗುತ್ತದೆ. ಆದರೆ ಕನಿಷ್ಠ ಮೂಲಸೌಕರ್ಯ ಒದಗಿಸಲು ನಗರಾಡಳಿತ ವಿಫಲವಾಗಿದೆ
ಗಣೇಶ ಶೆಟ್ಟಿ ನಗರ ನಿವಾಸಿ
ಸ್ಮಶಾನಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ. ಹಂತಹಂತವಾಗಿ ಅಭಿವೃದ್ಧಿ ಕಾಮಗಾರಿ ನಡೆಸಲಾಗುವುದು
ಕಾಂತರಾಜ್ ಪೌರಾಯುಕ್ತ
ಮಾದರಿ ರುದ್ರಭೂಮಿ
ನಗರದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ವಿದ್ಯಾನಗರ ರುದ್ರಭೂಮಿ ಅಭಿವೃದ್ಧಿ ದೃಷ್ಟಿಯಿಂದ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ರುದ್ರಭೂಮಿಯಲ್ಲಿ ಕೇವಲ ಶವ ಸಂಸ್ಕಾರವಷ್ಟೇ ಮಾಡುತ್ತಿಲ್ಲ. ಇದರ ಆವರಣದಲ್ಲಿ ರಂಗಧಾಮ ನಿರ್ಮಿಸಿ ಸಾಂಸ್ಕೃತಿಕ ಕಲೆ ಸಾಹಿತ್ಯ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವ ಕಾರ್ಯವಾಗಿದೆ. ವೈವಿಧ್ಯಮಯ ಹಣ್ಣಿನ ಗಿಡಗಳು ಗಮನ ಸೆಳೆಯುತ್ತವೆ. ಈ ಸ್ಮಶಾನದ ಸ್ವಚ್ಛತೆಗೆ ವಿವಿಧ ಸಂಘಟನೆಗಳು ಸ್ವಯಂ ಪ್ರೇರಣೆಯಿಂದ ಕೈಜೋಡಿಸುತ್ತಿವೆ. ಇಡೀ ಸ್ಮಶಾನದ ಆವರಣವನ್ನು ಅತಿಕ್ರಮಣವಾಗದಂತೆ ಭದ್ರಪಡಿಸಲಾಗಿದೆ.