<p><strong>ಶಿರಸಿ:</strong> ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಿವಗಂಗಾ ಜಲಪಾತ ಪ್ರವಾಸಿಗರ ಪಾಲಿಗೆ ರಮಣೀಯ ತಾಣ. ಆದರೆ ಅಷ್ಟೇ ಅಪಾಯಕಾರಿಯೂ ಹೌದು.</p>.<p>ಹಸಿರಿನಿಂದ ಕಂಗೊಳಿಸುವ ಬೆಟ್ಟದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ ದೂರದಿಂದಲೇ ವೀಕ್ಷಿಸಬೇಕು. ಹತ್ತಿರ ತೆರಳಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈಚೆಗೆ ಜಲಪಾತದ ಸಮೀಪ ಫಲಕ ಅಳವಡಿಸಿದ್ದು ಬಿಟ್ಟರೆ ಸುರಕ್ಷತೆಗೆ ಕ್ರಮವಾಗಿಲ್ಲ.</p>.<p>ಜಲಪಾತ ವೀಕ್ಷಣೆಗೆ ನಿರ್ಮಿಸಿದ ವೀಕ್ಷಣಾ ಗೋಪುರದ ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ವಾಹನ ನಿಲುಗಡೆ ಮಾಡುವ ಜಾಗದಲ್ಲೂ ವ್ಯವಸ್ಥಿತವಾದ ಜಾಗ ನಿರ್ಮಿಸಿಲ್ಲ. ಮುಖ್ಯ ರಸ್ತೆಯಿಂದ ಜಲಪಾತದತ್ತ ತೆರಳುವ ಮಾರ್ಗವೂ ದುರ್ಗಮವಾಗಿದೆ. ಹೀಗೆ ಹಲವು ಸೌಕರ್ಯದ ಕೊರತೆ ಕಾಡುತ್ತಿದೆ.</p>.<p>ಪಟ್ಟಣದ ಹೊಳೆ ಗುಡ್ಡದಿಂದ ಸುಮಾರು 74 ಮೀ. ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸೃಷ್ಟಿಸುವ ಸೊಬಗನ್ನು ಶಿವಗಂಗಾ ಜಲಪಾತ ಎನ್ನಲಾಗುತ್ತದೆ. ಇದನ್ನು ನೋಡಲು ವರ್ಷಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜಲಪಾತ ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಮೀಪ ತೆರಳಿ ಜೀವ ಕಳೆದುಕೊಂಡವರ ಸಂಖ್ಯೆ ಸಾಕಷ್ಟಿದೆ.</p>.<p>‘ಶಿವಗಂಗಾ ಜಲಪಾತ ಜಿಲ್ಲೆಯ ಉತ್ತಮ ಜಲಪಾತಗಳಲ್ಲಿ ಒಂದಾದರೂ ಹೆಚ್ಚು ಪ್ರಚಾರ ಸಿಕ್ಕಿಲ್ಲ. ನಗರದಿಂದ ದೂರ ಇರುವದು ಒಂದು ಕಾರಣವಾದರೆ, ಈ ತಾಣದ ಬಗ್ಗೆ ಜನರಿಗೆ ತಿಳಿಸಲು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿಲ್ಲ. ಅಲ್ಲದೆ ಇಲ್ಲಿ ಸೌಕರ್ಯಗಳನ್ನೂ ಒದಗಿಸಲಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಹರೀಶ ಹೆಗಡೆ.</p>.<p>‘ಶಿವಗಂಗಾ ಜಲಪಾತದ ವೀಕ್ಷಣಾ ಗೋಪುರ ದುರಸ್ಥಿ ಸೇರಿದಂತೆ ಇಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗುವುದು. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಮೂಲಕ ತಾಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ತಾಲ್ಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿ ಕೊಡ್ನಗದ್ದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಿವಗಂಗಾ ಜಲಪಾತ ಪ್ರವಾಸಿಗರ ಪಾಲಿಗೆ ರಮಣೀಯ ತಾಣ. ಆದರೆ ಅಷ್ಟೇ ಅಪಾಯಕಾರಿಯೂ ಹೌದು.</p>.<p>ಹಸಿರಿನಿಂದ ಕಂಗೊಳಿಸುವ ಬೆಟ್ಟದಿಂದ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಪಾತ ದೂರದಿಂದಲೇ ವೀಕ್ಷಿಸಬೇಕು. ಹತ್ತಿರ ತೆರಳಿ ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಈಚೆಗೆ ಜಲಪಾತದ ಸಮೀಪ ಫಲಕ ಅಳವಡಿಸಿದ್ದು ಬಿಟ್ಟರೆ ಸುರಕ್ಷತೆಗೆ ಕ್ರಮವಾಗಿಲ್ಲ.</p>.<p>ಜಲಪಾತ ವೀಕ್ಷಣೆಗೆ ನಿರ್ಮಿಸಿದ ವೀಕ್ಷಣಾ ಗೋಪುರದ ಚಾವಣಿ ಮುರಿದು ಬೀಳುವ ಸ್ಥಿತಿಯಲ್ಲಿದೆ. ವಾಹನ ನಿಲುಗಡೆ ಮಾಡುವ ಜಾಗದಲ್ಲೂ ವ್ಯವಸ್ಥಿತವಾದ ಜಾಗ ನಿರ್ಮಿಸಿಲ್ಲ. ಮುಖ್ಯ ರಸ್ತೆಯಿಂದ ಜಲಪಾತದತ್ತ ತೆರಳುವ ಮಾರ್ಗವೂ ದುರ್ಗಮವಾಗಿದೆ. ಹೀಗೆ ಹಲವು ಸೌಕರ್ಯದ ಕೊರತೆ ಕಾಡುತ್ತಿದೆ.</p>.<p>ಪಟ್ಟಣದ ಹೊಳೆ ಗುಡ್ಡದಿಂದ ಸುಮಾರು 74 ಮೀ. ಎತ್ತರದಿಂದ ಧುಮ್ಮಿಕ್ಕುತ್ತದೆ. ಇದು ಸೃಷ್ಟಿಸುವ ಸೊಬಗನ್ನು ಶಿವಗಂಗಾ ಜಲಪಾತ ಎನ್ನಲಾಗುತ್ತದೆ. ಇದನ್ನು ನೋಡಲು ವರ್ಷಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಜಲಪಾತ ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಮೀಪ ತೆರಳಿ ಜೀವ ಕಳೆದುಕೊಂಡವರ ಸಂಖ್ಯೆ ಸಾಕಷ್ಟಿದೆ.</p>.<p>‘ಶಿವಗಂಗಾ ಜಲಪಾತ ಜಿಲ್ಲೆಯ ಉತ್ತಮ ಜಲಪಾತಗಳಲ್ಲಿ ಒಂದಾದರೂ ಹೆಚ್ಚು ಪ್ರಚಾರ ಸಿಕ್ಕಿಲ್ಲ. ನಗರದಿಂದ ದೂರ ಇರುವದು ಒಂದು ಕಾರಣವಾದರೆ, ಈ ತಾಣದ ಬಗ್ಗೆ ಜನರಿಗೆ ತಿಳಿಸಲು ಪ್ರವಾಸೋದ್ಯಮ ಇಲಾಖೆ ಮುತುವರ್ಜಿ ವಹಿಸಿಲ್ಲ. ಅಲ್ಲದೆ ಇಲ್ಲಿ ಸೌಕರ್ಯಗಳನ್ನೂ ಒದಗಿಸಲಾಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯರಾದ ಹರೀಶ ಹೆಗಡೆ.</p>.<p>‘ಶಿವಗಂಗಾ ಜಲಪಾತದ ವೀಕ್ಷಣಾ ಗೋಪುರ ದುರಸ್ಥಿ ಸೇರಿದಂತೆ ಇಲ್ಲಿ ಅಗತ್ಯ ಸೌಕರ್ಯ ಒದಗಿಸಲಾಗುವುದು. ಸ್ಥಳೀಯ ಗ್ರಾಮ ಅರಣ್ಯ ಸಮಿತಿ ಮೂಲಕ ತಾಣವನ್ನು ಸುರಕ್ಷಿತವಾಗಿಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>