‘ಪಾದಚಾರಿಗಳ ಮಾರ್ಗಗಳು ಭರ್ಜರಿ ಆದಾಯ ತರುವ ಕೇಂದ್ರಗಳಾಗಿ ಮಾರ್ಪಟ್ಟಿವೆ. ತರಕಾರಿ, ಮಿರ್ಚಿ ಭಜಿ, ಪಾನಿಪುರಿ, ತಿಂಡಿ ತಿನಿಸು ಮಾರುವ ತಳ್ಳುಗಾಡಿಗಳು, ಎಳನೀರು ಕೇಂದ್ರ, ಹಣ್ಣು ಹಂಪಲು ಮಾರಾಟದ ತಳ್ಳುಗಾಡಿ, ಗೂಡಂಗಡಿ, ಟೀ ಅಂಗಡಿ, ವಿವಿಧ ಆಟಿಕೆ ಸಾಮಾನುಗಳ ಅಂಗಡಿ ಇಡಲಾಗುತ್ತಿದೆ. ವಿವಿಧ ಕಡೆ ಪ್ರಮುಖ ಸರ್ಕಾರಿ ಕಚೇರಿಗಳ ಮುಂಭಾಗದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಅಂಗಡಿಗಳನ್ನು ಸ್ಥಾಪನೆ ಮಾಡಲಾಗಿದೆ. ಇನ್ನೂ ಕೆಲವರು ಸರ್ಕಾರದ ಜಾಗದಲ್ಲೇ ಡಬ್ಬಾ ಅಂಗಡಿಗಳನ್ನು ಸ್ಥಾಪಿಸಿ ಕೆಲವರಿಗೆ ಬಾಡಿಗೆ ಆಧಾರದ ಮೇಲೆ ನೀಡುತ್ತಿದ್ದಾರೆ. ಇದರಿಂದ ಸರ್ಕಾರದ ಜಾಗವನ್ನು ಖಾಸಗಿ ವ್ಯಕ್ತಿಗಳು ಅಕ್ರಮಿಸಿಕೊಂಡು ಬಾಡಿಗೆ ನೀಡಲಾಗುತ್ತಿದೆ’ ಎಂಬುದು ಸಾರ್ವಜನಿಕರ ಆರೋಪ.