ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ ಸಂಭ್ರಮ: ಮಾರಿಕಾಂಬಾ ಕಲ್ಯಾಣೋತ್ಸವ ಇಂದು

Published 19 ಮಾರ್ಚ್ 2024, 4:42 IST
Last Updated 19 ಮಾರ್ಚ್ 2024, 4:42 IST
ಅಕ್ಷರ ಗಾತ್ರ

ಶಿರಸಿ: ದೈವಾರ್ಷಿಕವಾಗಿ ನಡೆಯುವ ಮಾರಿಕಾಂಬಾ ಜಾತ್ರೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮಂಗಳವಾರ ರಾತ್ರಿ ನಡೆಯುವ ದೇವಿಯ ಕಲ್ಯಾಣ ಮಹೋತ್ಸವದೊಂದಿಗೆ ಜಾತ್ರೆ ಕಳೆಗಟ್ಟಲಿದೆ.

ಮಾರಿಕಾಂಬಾ ಜಾತ್ರೆಗೆ ಸಂಬಂಧ ಒಂದೂವರೆ ತಿಂಗಳಿನಿಂದ ದೇವಸ್ಥಾನದಿಂದ ವಿವಿಧ ಧಾರ್ಮಿಕ ವಿಧಾನಗಳು ನೆರವೇರಿದ್ದು ಮಾರ್ಚ್‌ 19ರ ಮಧ್ಯಾಹ್ನ ದೇವಿಯ ರಥದ ಕಲಶ ಪ್ರತಿಷ್ಠೆಯೊಂದಿಗೆ ಜಾತ್ರೆಯ ವಿಧಿವಿಧಾನಗಳು ಆರಂಭವಾಗಲಿದೆ. ಈ ಸಂದರ್ಭದಲ್ಲಿ ರಥಕ್ಕೆ ಪೂಜೆ, ಹೋಮ ಕಾರ್ಯ ನಡೆಯಲಿದೆ. ರಾತ್ರಿ 11.39ರಿಂದ 11.45 ಗಂಟೆಯೊಳಗೆ ಮಾರಿಕಾಂಬಾ ದೇವಸ್ಥಾನದ ಸಭಾ ಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯುವುದು. ಮಾರ್ಚ್‌ 20ರಂದು ರಥೋತ್ಸವದ ಮೂಲಕ ದೇವಿ ಜಾತ್ರಾ ಗದ್ದುಗೆಗೆ ಬರಲಿದ್ದು, ಈ ಹಿನ್ನೆಲೆಯಲ್ಲಿ ದೇವಸ್ಥಾನದ ಎದುರು ಕಳೆದ ಆರೇಳು ದಿವಸಗಳಿಂದ ರಥ ಕಟ್ಟುವ ಕಾರ್ಯ ನಡೆಯುತ್ತಿದೆ.

ಸುಮಾರು 46 ಅಡಿಯಷ್ಟು ಎತ್ತರದ ರಥವನ್ನು ಮಂಜುಗುಣಿಯ ಮರಾಠಿ ಸಮುದಾಯದ ಎಂಟು ಮಂದಿ ಈ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಗ್ಗದ ಮೀಳೆ ಹಾಕಿ, ಹದಿನೆಂಟು ವಿಭಾಗಗಗಳಲ್ಲಿ ಅಡಕೆ ದಬ್ಬೆಗಳನ್ನು ಅಳವಡಿಸಲಾಗುತ್ತಿದೆ. ರಥಕ್ಕೆ ಕಲಶ ಪ್ರತಿಷ್ಠೆಯಾದ ನಂತರ ರಥಕ್ಕೆ ಸುಮಾರು ಮೂರೂವರೆ ಸಾವಿರದಷ್ಟು ಪತಾಕೆಯನ್ನು ಜೋಡಿಸಲಾಗುತ್ತದೆ. 

ಬಿಡ್ಕಿ ಬಯಲಿನ ಪ್ಲಾಟುಗಳನ್ನು ಹರಾಜಿನ ಮೂಲಕ ಪಡೆದವರು ಅಂಗಡಿಗಳನ್ನು ಜೋಡಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಹಣ್ಣು, ಮಿಠಾಯಿ, ಸ್ಟೇಶನರಿ ಸಾಮಗ್ರಿಗಳ ಅಂಗಡಿಕಾರರು ಮಳಿಗೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮನಂರಜನಾ ಸಾಮಗ್ರಿಗಳ ಆಕರ್ಷಣೆಯಿರುವ ಕೋಣನಬಿಡ್ಕಿ ಪ್ರದೇಶದಲ್ಲಿ ತೊಟ್ಟಿಲು, ಬೈಕ್, ಕಾರ್ ಸಂಚಾರ ಬಾವಿ, ಟೋರೋಟೋರೋ ಹೀಗೆ ನಾನಾ ಮನರಂಜನಾ ಪ್ರದರ್ಶನದ ತಯಾರಿಯನ್ನು ಮಾಡಲಾಗುತ್ತಿದೆ. ಅದೇ ರೀತಿ ಗೋವಿಂದರಾವ್ ಹಾಲ್, ವಿಕಾಸಾಶ್ರಮ ಬಯಲು, ದುಂಡಸಿ ನಗರದ ಸಮೀಪದಲ್ಲಿ ನಾಟಕ ಪ್ರದರ್ಶನದ ಟೆಂಟ್‌ಗಳನ್ನು ಹಾಕಿ ನಾಟಕ ಕಂಪನಿಗಳು ಪ್ರದರ್ಶನಕ್ಕೆ ಸಿದ್ಧವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT