ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಸಿ | ಮಾವನಿಂದ ಅಳಿಯನ ಕೊಲೆ

Published 2 ಮೇ 2024, 14:19 IST
Last Updated 2 ಮೇ 2024, 14:19 IST
ಅಕ್ಷರ ಗಾತ್ರ

ಶಿರಸಿ: ತನ್ನ ಮಗಳ ಶೀಲ ಶಂಕಿಸಿದ ಅಳಿಯನನ್ನು ಮಾವ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ತಾಲ್ಲೂಕಿನ ಮಳಲಿಯಲ್ಲಿ ಗುರುವಾರ ನಡೆದಿದೆ.

ಮಳಲಿಯ ಮಂಜುನಾಥ ಗೌಡ ಕೊಲೆಯಾದ ಅಳಿಯನಾಗಿದ್ದು, ಮಾವ ವೆಂಕಟರಮಣ ಗೌಡ ಆರೋಪಿಯಾಗಿದ್ದಾನೆ. ಮನೆ ಅಳಿಯ ಮಂಜುನಾಥ ಗೌಡ ಪದೇ ಪದೇ ಮಗಳ ಶೀಲ ಶಂಕಿಸುತ್ತಿದ್ದಲ್ಲದೇ, ಜಗಳವಾಡುತ್ತಿದ್ದ. ಮನೆಯವರು ಊರಿನಲ್ಲಿನ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದ ವೇಳೆ ಮಾವ, ಅಳಿಯ ಮದ್ಯ ಸೇವಿಸುತ್ತಿದ್ದು, ಆಗ ಇಬ್ಬರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. 

ಕೊಲೆ ಮಾಡಿ ನಾಪತ್ತೆಯಾದ ಆರೋಪಿಯನ್ನು ಒಂದು ಗಂಟೆ ಒಳಗೆ ಗ್ರಾಮೀಣ ಠಾಣೆ ಪಿ.ಎಸ್.ಐ. ಪ್ರತಾಪ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಘಟನಾ ಸ್ಥಳಕ್ಕೆ ಡಿ.ಎಸ್.ಪಿ ಎಂ.ಎಸ್.ಪಾಟೀಲ, ಗ್ರಾಮೀಣ ಠಾಣೆ ಪಿಐ ಮಹೇಶಪ್ರಸಾದ ತೆರಳಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT