‘ಮುಂಡಿಗೆ ಕೆರೆಯ ಏರಿ ದುರಸ್ತಿ ಹಾಗೂ ಒನಕೆ ತೂಬಿನ ವ್ಯವಸ್ಥೆಗೆ ಕ್ರಮವಾಗಿಲ್ಲ. ಮಾರ್ಗಸೂಚಿ ಫಲಕಗಳಿಲ್ಲ. ವಿವಿಧ ಪಕ್ಷಿಗಳ ಕುರಿತು ಫಲಕ ಸ್ಥಾಪನೆ, ಪಕ್ಷಿಗಳ ಬಗ್ಗೆ ಮಾಹಿತಿ ಕೊರತೆ ಪ್ರವಾಸಿಗರನ್ನು ಕಾಡುತ್ತಿದೆ. ಪ್ರವಾಸಿಗರನ್ನು ಸೆಳೆಯುವುದಕ್ಕೆ ಪೂರಕವಾಗಿ ಸಸ್ಯವನ ನಿರ್ಮಾಣ, ಆಸನದ ವ್ಯವಸ್ಥೆ, ವಿಶ್ರಾಂತಿ ಕೊಠಡಿ ನಿರ್ಮಾಣ, ಸುಲಭ ಶೌಚಾಲಯ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವಾಹನ ಪಾರ್ಕಿಂಗ್ ಸೌಲಭ್ಯ, ವೀಕ್ಷಣಾ ಗೋಪುರಕ್ಕೆ ಹೋಗಲು ಅನುಕೂಲವಾಗುವಂತೆ ಫುಟ್ ಬ್ರಿಜ್ ನಿರ್ಮಾಣ, ಪಕ್ಷಿಗಳ ಕುರಿತು ಗ್ರಂಥಾಲಯ ನಿರ್ಮಾಣ, ವಾಚಮನ್ ನೇಮಕ, ವಸತಿ ಗೃಹ ಹಂತಹಂತವಾಗಿ ಈ ಪ್ರದೇಶದಲ್ಲಿ ಆಗಬೇಕಿದೆ’ ಎಂಬುದು ಸೋಂದಾ ಜಾಗೃತ ವೇದಿಕೆಯ ಪ್ರಮುಖ ರತ್ನಾಕರ ಬಾಡಲಕೊಪ್ಪ ಅವರ ಒತ್ತಾಯ.