‘ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಸಹಕಾರ ನೀಡಬೇಕು. ಎಲ್ಲರ ಹಿತ ಕಾಯುತ್ತ ಧರ್ಮ ಸಂರಕ್ಷಣೆ ಆಗಬೇಕು. ಆ ಭಾವದಲ್ಲಿ ಸರ್ಕಾರ, ಸಮಾಜ ಎಲ್ಲವೂ ಕೆಲಸ ಮಾಡಬೇಕು’ ಎಂದು ವಿವರಿಸಿದ ಸ್ವಾಮೀಜಿ, ‘ಅಹಂಕಾರ ಕಡಿಮೆ ಆದಷ್ಟು ನೆಮ್ಮದಿ. ಅಹಂಕಾರ ಹೆಚ್ಚಾದರೆ ಅನಾರೋಗ್ಯದ ಜೊತೆ ಕೌಟುಂಬಿಕ ಸಮಸ್ಯೆ, ಕಲಹಗಳೂ ಉಂಟಾಗುತ್ತದೆ. ಸಾಮಾಜಿಕ ಸಮಸ್ಯೆಗಳೂ ಹೆಚ್ಚಾಗುತ್ತದೆ. ತೀವ್ರತೆ, ಘರ್ಷಣೆ ಆಗುತ್ತದೆ. ಆರೋಗ್ಯ, ಸಾಮರಸ್ಯ, ಮುಖ್ಯವಾಗಿ ಧರ್ಮ ಸಂರಕ್ಷಣೆಗೆ ನಿರಹಂಕಾರ ಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.