ಹಿರಿಯ ವಿದ್ವಾಂಸ ಪ್ರಭಾಕರ ಜೋಶಿ ಮಾತನಾಡಿ, ‘ಭಾಗವತರ ಕುರಿತಾದ ಪುಸ್ತಕಕ್ಕೆ ಪ್ರಧಾನ ಮಾರ್ಗದರ್ಶಕನಾಗಿದ್ದು ಬದುಕಿನಲ್ಲಿ ನನಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ಅವರು ಮಾಡಿದ ಕೆಲಸ ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಭಾಗವತರು ದಕ್ಷಿಣೋತ್ತರ ಕನ್ನಡದಲ್ಲಿ ಯಕ್ಷಗಾನದ ಯುಗ ಪರಿವರ್ತಕರು. ಯಕ್ಷಗಾನದಲ್ಲಿ ಅಗಾಧ ಕೆಲಸ ಮಾಡಿದ್ದಾರೆ. ವೇಷಧಾರಿ, ಗುರು, ಕವಿ, ಮದ್ದಳೆಗಾರ, ಭಾಗವತ ಹೀಗೆ ಎಲ್ಲ ವಿಭಾಗಗಳಲ್ಲೂ ತಜ್ಞರಾಗಿದ್ದರು’ ಎಂದರು.