ತಾಲ್ಲೂಕಿನ ಇಸಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವ್ಯಕ್ತಿಯೊಬ್ಬರು ಕೆಲ ತಿಂಗಳುಗಳ ಹಿಂದೆ ಉದ್ಯೋಗಕ್ಕಾಗಿ ಠಾಣೆಗೆ ಹೋಗಿದ್ದರು. ಲಾಕ್ಡೌನ್ ಕಾರಣಕ್ಕೆ ಅವರು ರೈಲಿನಲ್ಲಿ ಹೊರಟು, ಬೆಂಗಳೂರು ಮಾರ್ಗವಾಗಿ ತಮ್ಮ ಊರಿಗೆ ಹಿಂದಿರುಗಿದ್ದರು. ಕೋವಿಡ್ 19 ಉಲ್ಬಣಿಸಿರುವ ರಾಜ್ಯದಿಂದ ಹೊರಟು ಬಂದಿರುವ ತಂದೆಯನ್ನು ನೋಡಿದ ಮಗ, ಅವರ ಬಳಿ ತೋಟದಲ್ಲಿ ನಿಲ್ಲುವಂತೆ ಹೇಳಿ, ತಕ್ಷಣ ಈ ವಿಷಯವನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗೆ ತಿಳಿಸಿದರು. ಪಂಚಾಯ್ತಿ ಅಧ್ಯಕ್ಷೆ ನಿರ್ಮಲಾ ಶೆಟ್ಟಿ, ಪಿಡಿಒ ರವಿರಾಜ್, ಪೊಲೀಸರು, ಆರೋಗ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.