‘ಸುಪ್ರಿಂಕೋರ್ಟ್ನಲ್ಲಿ ಅತಿಕ್ರಮಣದಾರರ ಹಿತ ಕಾಯಲು ಅಫಿಡವಿಟ್ ಸಲ್ಲಿಕೆಗೆ ಅಧಿಕಾರಿಗಳ ಸಭೆ ನಡೆಸಲಾಗಿದ್ದು, ರಾಜ್ಯ ಸರ್ಕಾರದಿಂದ ಶೀಘ್ರ ಅಫಿಡವಿಟ್ ಸಲ್ಲಿಕೆಯಾಗಲಿದೆ. ಅರಣ್ಯ ಅತಿಕ್ರಮಣದಾರರಿಗೆ ಭೂಮಿ ಹಕ್ಕು ಮಂಜೂರಾತಿ ನೀಡಲು ಪ್ರಯತ್ನ ನಡೆದಿದೆ. ಕ್ಲಿಷ್ಟಕರ ನಿಯಮಾವಳಿ ಕಾರಣ ಅಡ್ಡಿಯಾಗುತ್ತಿದ್ದು ಅದನ್ನು ನಿವಾರಿಸಲು ಪ್ರಯತ್ನ ನಡೆದಿದೆ’ ಎಂದರು.